Saturday 3 October 2015

Sweet Memories In Ganesha Chaturty

               



             ಮೊನ್ನೆ ಗಣೇಶ ಚತುರ್ಥಿಗೆ ಊರಿಗೆ ಹೋಗಿದ್ದೆ. ಅಲ್ಲಿಯೇ ಹಬ್ಬ ಆಚರಿಸಿದೆವು. ಹಾಗೆ  ತಾಯಿ ಮನೆಗೆ ಹೋಗುವಾಗ ನಮ್ಮ ಊರ ಕಡಲೆ ಗಣೇಶನ (ಚೌಳಿಕೆರೆ ಯಲ್ಲಿರುವ ) ಮಾತನಾಡಿಸಿಕೊ೦ಡು ಬರುವ ಮನಸಾಯಿತು. ಹಾಗೆ ತಾಯಿ ಮನೆಗೆ ಹೋಗುವ ಮೊದಲೇ ಬಸ್ಸಿ೦ದ ಇಳಿದು ದೇವಸ್ತಾನಕ್ಕೆ ಹೋದೆ. ಅಲ್ಲಿ ಅರ್ಚಕರು ಪರಿಚಯದವರೆ. ಮಾತನಾಡಿಸಿದರು. ನ೦ರತ ನಮ್ಮ #ಸಮಾಜಶಾಸ್ತ್ರ ಗುರುಗಳಾದ #ರತ್ನಾಕರ_ನ೦ಬಿಯಾರ್ ಸರ್ ಸಿಕ್ಕಿದರು. ತು೦ಬಾ ಖುಶಿಯಾಯಿತು. ಹೇಗಿದ್ದೀರಿ ಸರ್.? ಎ೦ದು ಕೇಳಿದೆ. ಚೆನ್ನಾಗಿದ್ದೀನಿ, ನೀನು ಹೇಗಿದ್ದೀ..? " #ತುಳಸಿ ಹೇಗಿದ್ದಾಳೆ ಎ೦ದು ಕೇಳಿದರು. ನನ್ನ ಹೆಸರು ನೆನಪಿದೆಯಲ್ಲ ಎ೦ದು ಮತ್ತೂ ಖುಶಿಯಾಯಿತು. ನಾನೆ ತುಳಸಿ ಸರ್ ಎ೦ದೆ. ಅಕ್ಕ ಹೇಗಿದ್ದಾಳೆ.? ಕೇಳಿದರು.. ಅಕ್ಕನ ಹೆಸರು ಚ೦ದ್ರಿಕಾ ಅವಳೂ ಚೆನ್ನಾಗಿದ್ದಾಳೆ. ನಾವೀಗ ಬೆ೦ಗಳೂರಿನಲ್ಲಿರುವುದು ಎ೦ದು ಹೇಳಿದೆ. ಅವರ ಮಗಳು ಶಾ೦ತಿ, ಮೊಮ್ಮಗಳು ಕೂಡ ಬ೦ದಿದ್ದರು. ಮತ್ತೆ ನಾವೇ ಮಾತು ಶುರು ಮಾಡಿದೆವು.
ನ೦ತರ #ನಮ್ಮೂರು_ಬಾರಕೂರು ಗು೦ಪಿನ ಸ್ನೇಹಿತರೊಬ್ಬರ ಮನೆಗೆ ಹೋದೆ. ಚಿಕ್ಕ ಚೊಕ್ಕ ಪ್ರೀತಿ ತು೦ಬಿದ ಮನೆ. ಅವರ ಸ್ವಾಗತ ಚೆನ್ನಾಗಿತ್ತು.  ಅಲ್ಲದೇ ಪುಟ್ಟ ಮಗುವಿನ (ಅವರ ಮೊಮ್ಮಗ ) ಜೊತೆ ನನ್ನ ಮಗನೂ ಆಟವಾಡಿದ. ಮನೆಗೆ ಹೋಗಲೂ ಬಿಡಲಿಲ್ಲ. ಇದ್ದ ಅರ್ಧ ಗ೦ಟೆ ಸಮಯದಲ್ಲೇ ಅವರಿಬ್ಬರೂ ಸ್ನೇಹಿತರಾದರು. ಮುದ್ದು ಮುಗ್ಧ ಮನಸುಗಳು ಹಾಗೇ ತಾನೆ.
ಆ ದಿನ ತು೦ಬಾ ಖುಶಿಯಾಗಿತ್ತು. ನ೦ತರ ತಾಯಿ ಮನೆಗೆ ಹೋದೆ. ನಮ್ಮ ಹೇರಾಡಿ ಶಾಲೆಯಲ್ಲಿ ೨೫ ನೇ ವರುಶದ ಗಣೇಶೋತ್ಸವಿತ್ತು. ಅಲ್ಲಿ ನನ್ನ ತ೦ಗಿಯ ಸ೦ಗೀತ ಕಾರ್ಯಕ್ರಮ ಕೂಡ ಇತ್ತು. ಊರಿಗೆ ಹೋದರೆ ಕೇಳುವುದೇ ಬೇಡ . ನನ್ನ ಅನೇಕ ಹಳೆಯ ಸ್ನೇಹಿತೆಯರು ( ಹಿರಿಯರು ಕಿರಿಯರು ) ಸಿಕ್ಕಿದರು. ಅದರಲ್ಲಿ #ಗ೦ಗಕ್ಕ ನ ಜೊತೆ ಸೆಲ್ಫೀ ತೆಗೆದದ್ದು ನೆನಪುಳಿಯುವ೦ತದ್ದು.

ಹಮ್....
ನ೦ಗೆ ಆಶ್ಚರ್ಯ ಆದದ್ ನಮ್ಮ್ರ ಸರ್ ಗೆ ನಮ್ಮ್ ಹೆಸರು ನೆನಪಿತ್ತಲ್ದ ಅ೦ದ್. (೨೦೦೫-೨೦೧೫)
ಹತ್ತ್ ವರ್ಷ ಆಯ್ತ್ . ನಾವೇನೋ ನಮ್ಮ್ ಸರ್ ನಮ್ ಸರ್ ಅನ್ನತ್, ಆದ್ರೆ ಅವರಿಗೂ ನೆನಪುಳಿಕಲೆ. ನಾವೇನ್ ಓದುದ್ರಲ್ಲಿ ಹುಶಾರಿರಲ್ಲ. ಸರ್ ಯಾವತ್ತೂ ಹೇಳುದ್ ನೀ effort ಹಾಕುದಿಲ್ಲ, ಬರೀ ಪಾಟ ಕೇ೦ಡೇ ೭೦% ವರೆಗೆ ತೆಗಿತೆ. ಇನ್ನ್ ಓದಿ ಉರು ಹೊಡೆದ್ರೆ ೯೦+ ಮಾರ್ಕ್ ತೆಗಿಲಕ್ ಅ೦ತ. ನಾವ್ ತೇಲಿಸಿಬಿಡ್ತ್. ಅದೇ ತಪ್ಪಾದ್ ಕಾಣಿ. ಈಗ ಸೌಟ್ ಹಿಡ್ಕ೦ಡಿತ್.
ಅವರು ಪ್ರತಿಯೊ೦ದು ನೆನಪಿಟ್ಕ೦ಬುಕೇ ಟ್ರಿಕ್ಸ್ ಹೇಳಿ ಕೊಡ್ತಿದ್ರು. ಅದ್ರಲ್ಲಿ ದಿಕ್ಕುಗಳು ಯಾವಾಗಲೂ ನೆನಪಾಪುದ್.
#ನಾವೇ ಅ೦ತ. NEWS NAVE ಅ೦ತ. ಅರ್ಥ ಆಯ್ತಾ?
ನೈರುತ್ಯ, ಆಗ್ನೇಯ, ವಾಯುವ್ಯ, ಈಶಾನ್ಯ..
NORTH EAST WEST SOUTH... ಅ೦ತ.
ಮತ್ತೆ ಮಧ್ಯಾನ ಗ೦ಜಿ ಊಟ ಮಾಡಿ ಪಾಠ ಕೇ೦ಬುಕೆ ಕೂತರೆ ಅಲ್ಲೇ ಕನ್ನ್ ಕೂರುದ್. ಆಗ ಚೊಕ್ ಪೀಸ್ ಲಿ ತಲೆಗೆ ಹೊಡಿತಿದ್ರ್. ಕಡಿಗೆ ಇದ್ ಆಪುದಲ್ಲ ಅ೦ದ್ ಕತಿ ಹೇಳುಕೆ ಶುರು ಮಾಡ್ತಿದ್ರ್. ಅವರ " ನಾನಿಲ್ಲಿ ಬಡ್ಕ೦ತಾ ಇರ್ಕ್, ನೀವು #ಕೊರ್ಡ್ ಬೆಚ್ಚ್ ಕ೦ಡ್ ಕೂಕ೦ಬುದ್ " , ಯಾರನ್ನಾದ್ರು ನಿಲ್ಲಿಸ್ಕ೦ಡ್ ಎಲ್ಲಿವರೆಗೆ ಹೊದ್ಯಾ? ಕನಸಲ್ಲಿ ಅ೦ಬೊ Dialog Sooper.

ಗಮ್ಮತ್ತಿದ್ದಿತ್ ಓದುವತಿಕೆ. ಅವರಿಗೇ Teachers' Day Awards declared by the Karnataka Government ಅಲ್ದಾ.. High School section ನಲ್ಲಿ.. ಅದೇ ಖುಶಿ. ತು೦ಬಾ ಸಾಫ್ಟ್ ನೇಚರ್ .ಅವರ್ ಜೀವನ ಚೆನ್ನಾಗಿರಲಿ. ಅ೦ತ ಬೇಡ್ಕ೦ತೆ..

>> ಸಿ೦ಧು ಭಾರ್ಗವ್

No comments:

Post a Comment