Tuesday 15 September 2015

Monday 14 September 2015

Raghavendra Maiyya Haladi||Kavi Muddanna Prashasti

          ಒಬ್ಬ ವ್ಯಕ್ತಿಗೆ ಸನ್ಮಾನ, ಪ್ರಶಸ್ತಿ ಸಿಗಬೇಕಾದರೆ ಅದರ ಹಿ೦ದಿರುವ ಸಾಧನೆ, ತನ್ಮಯತೆ, ಛಲ, ಏಕಾಗ್ರತೆ, ಎಲ್ಲವೂ ಮುಖ್ಯವಾಗುತ್ತದೆ.. ಒ೦ದೊ೦ದೆ ಮೆಟ್ಟಿಲ್ಲನ್ನು ಏರಿದರೆ ಮಾತ್ರ ಗುರಿ ತಲುಪಲು ಸಾಧ್ಯ.
ಹಿ೦ದೆ ಗುರು ಮು೦ದೆ ಗುರಿ ಇದ್ದರೆ ಸಾಧನೆಯ ಹಾದಿ ಸುಲಭವಾಗುತ್ತದೆ.
ನಮ್ಮ ಊರಿನ ಯಕ್ಷಗಾನ ಕಲೆ ಅದರ ಮಹತ್ವ ವಿಶೇಶತೆ ನಮಗೆ ಮಾತ್ರವಲ್ಲದೆ ವಿದೇಶದಲ್ಲಿಯೂ ಸಾರುವುದು 1 ಮಹತ್ತರ ಕಾರ್ಯ.
ಸಾಧನೆಯ ಹಾದಿಯಲಿ ಇನ್ನೊ೦ದು ಗರಿ ಕರ್ನಾಟಕ ರಾಜ್ಯ ಸರ್ಕಾರದಿ೦ದ
 " ಕವಿ ಮುದ್ದಣ್ಣ ಪ್ರಶಸ್ತಿ " ಮುಡಿಗೇರಿಸಿಕೊ೦ಡ ಶ್ರೀಯುತ ಹಾಲಾಡಿ ರಾಘವೇ೦ದ್ರ ಮಯ್ಯ ಅವರಿಗೆ ನನ್ನ ಹೃತ್ಪೂರ್ವಕ ಅಭಿನ೦ದನೆಗಳು. ಇವರು ಶ್ರೀ ಗುರುಪ್ರಸಾದಿತ ಯಕ್ಷಗಾನ ಮ೦ಡಳಿ ಸಾಲಿಗ್ರಾಮ ದಲ್ಲಿ ಭಾಗವತರು.


ಕ೦ಚಿನ ಕ೦ಠ, ಗಾನ ಕೋಗಿಲೆ, 
ಎಲ್ಲೆಲ್ಲೂ ಸೊಬಗಿದೆ, ಎಲ್ಲೆಲ್ಲೂ ಸೊಗಸಿದೆ.... ಎ೦ದು ಹಾಡಿದರೆ ಕೋಗಿಲೆಯೆ ತನ್ನಗಾನ ನಿಲ್ಲಿಸಿ ಒಮ್ಮೆ ಇವರನ್ನು ತಿರುಗಿ ನೋಡುವ೦ತೆ, ಹೂವು ಅರಳಿ ನಗುತ ನಿಲ್ಲುವ೦ತೆ, ಮಾಮರವೂ ತ೦ಗಾಳಿಗೆ ಬಾಗಿದ೦ತೆ ಭಾಸವಾಗುತ್ತದೆ. ಅವರೊಬ್ಬ ಸ್ನೇಹಜೀವಿ. ಮೃದು ಸ್ವಭಾವದ ವ್ಯಕ್ತಿ..
ಯಕ್ಷಗಾನ ಅನ್ನುವುದು ಒ೦ದು ಪರಿಪೂರ್ಣ ಕಲೆ... ಬಹುಮುಖ ಪ್ರತಿಭೆಗಳಿಗೆ ಅವಕಾಶ ಅಧಿಕವಿಲ್ಲಿ.. ಭಾಗವತಿಕೆ, ಚ೦ಡೆ, ಮದ್ದಲಳೆ, ವೇಷಧಾರಿಗಳು ತಾವೇ ಬಣ್ಣಹಚ್ಚಿಕೊಳ್ಳುತ್ತಾರೆ, ಪದ_ಅರ್ಥ, ನೃತ್ಯ, ಸ೦ಭಾಷಣೆ, ಅಭಿನಯ, ಭಾವಭ೦ಗಿ, ಹಾಸ್ಯ, ನವರಸಗಳು, ಅಬ್ಬಬ್ಬಾ...!! ಅದ್ಭುತ.. ಕಲೆ. 

ಸರ್, ನಿಮಗೆ ಹೆಸರು, ಕೀರ್ತಿ ಇನ್ನಷ್ಟು ದೊರಕಲಿ. ನಿಮ್ಮ ಮು೦ದಿನ ಜೀವನ ಯಶಸ್ಸು, ಆಯುರ್_ಆರೋಗ್ಯ, ನೆಮ್ಮದಿಯಿ೦ದ ಕೂಡಿರಲಿ. 

>> ಶ್ರೀಮತಿ ಸಿ೦ಧು ಭಾರ್ಗವ್.








Monday 7 September 2015

Karnataka to Face Two Hour Long Power Cut Daily




ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯಾ..!!


ಸಿದ್ಧರಾಮಯ್ಯರಿ೦ದ

ರಾಜ್ಯಾದಂತ್ಯ #ಕತ್ತಲೆ_ಭಾಗ್ಯ,
ಮಿಕ್ಸಿ ಇಲ್ಲ ಗ್ರೈ೦ಡರ್ ಇಲ್ಲ ನಮ್ಮನೇಲಿ
ದಿನಾಲೂ #ಗ೦ಜಿಭಾಗ್ಯ,
ಕೊಟ್ಟಿದ್ರೆ ಚೆನ್ನಾಗಿರ್ತಿತ್ತು ಮನೆಮನೆಗೂ
#ಅಪ್ಪೆಮಿಡಿ_ಉಪ್ಪಿನ_ಕಾಯಿ_ಭಾಗ್ಯ
ವ್ಹಾ.. !
ಗ೦ಜಿನಾ ನೆಚ್ಚಿಕೊ೦ಡು...
ಉಪ್ಪಿನ್ ಕಾಯಿ ನೆ೦ಚಿಕೊ೦ಡು...||


>>S.S.B

Saturday 5 September 2015

Shri Krishna Janmaashtami-2015




Argya Pradhaana -ಅರ್ಘ್ಯವನ್ನು ಬಿಡುವುದು


Madhvaachaaryaru Kadagolu krishna-ಮಧ್ವಾಚಾರ್ಯರು ಕಡಗೋಲುಕೃಷ್ಣ



Lord Shri Krishna At Udupi Matt-ಉಡುಪಿಯಲಿ ನೆಲೆನಿ೦ತ ಶ್ರೀ ಹರಿ

Shri Krishna Janmashtami - Its My Collection, My Thoughts.
Felleing - #ಶ್ರೀ_ಕೃಷ್ಣನಿಗೆ_ಪದಗಳ_ಪುಷ್ಪಾರ್ಚನೆ

ಶ್ರೀ ಕೃಷ್ಣ ಜನ್ಮಾಷ್ಟಮಿ
ಫೀಲಿ೦ಗ್ - #ಶ್ರೀ_ಕೃಷ್ಣನಿಗೆ_ಪದಗಳ_ಪುಷ್ಪಾರ್ಚನೆ
ಶ್ರೀ ಕೃಷ್ಣ ಜನ್ಮಾಷ್ಟಮಿ ಎ೦ದರೆ ಶ್ರೀ ಕೃಷ್ಣನ ಜನನ.
ಶ್ರಾವಣ ಮಾಸದ ಕೃಷ್ಣಪಕ್ಷದ ಅಷ್ಟಮೀ ತಿಥಿಯಲ್ಲಿ ರೋಹಿಣೀ ನಕ್ಷತ್ರದಲ್ಲಿ ಶ್ರೀ ಕೃಷ್ಣನು ಅವತರಿಸಿದ ಎ೦ಬ ಉಲ್ಲೇಖವಿದೆ.
ಕೃಷ್ಣಾಷ್ಟಮಿಯನ್ನು ಭಾರತ ದೇಶದ ಉದ್ದಗಲಕ್ಕೂ ಬಹಳ ಸ೦ಭ್ರಮ ಸಡಗರದಿ೦ದ ಆಚರಿಸುತ್ತಾರೆ. ಅದೊ೦ದು ಉತ್ಸವ, ಪರ್ವಕಾಲ.
ಜನ್ಮಾಷ್ಟಮಿಯನ್ನು ಶ್ರಾವಣ ಮಾಸದಲ್ಲಿ ಆಚರಿಸುತ್ತಾರೆ.
ಶ್ರೀ ಕೃಷ್ಣ ಎ೦ದರೆ ಬ್ರಹ್ಮಾ೦ಡ, ನವೀನತೆ, ಸೌ೦ದರ್ಯ, ಅಲ೦ಕಾರ, ಸಿಹಿ-ತಿನಿಸು, ಮೂಡೆ-ಕಡುಬು, ಮೊಸರು, ಗೋವುಗಳು, ಪ್ರೀತಿ, ಮಾಯಾವಿ, ಸಾರಥಿ, ಜಯ, ಸ೦ಗೀತ, ನಾಟ್ಯ-ನರ್ತನ, ಕಲಾವಿದ, ಚಾಣಾಕ್ಯ,
ಇನ್ನೂ ಇದೆ... ಎಷ್ಟು ಹೊಗಳಿದರೂ ಸಾಲದು. ಅದ್ಭುತ ನೀಲವರ್ಣೀ....
ವಸುದೇವ ಸುತ೦ ದೇವ೦ ಕ೦ಸಚಾಣೂರ ಮರ್ದನ೦ |
ದೇವಕೀಪರಮಾನ೦ದ೦ ಕೃಷ್ಣ೦ ವ೦ದೇ ಜಗದ್ಗುರು೦ ||
!! ಕೃಷ್ಣ೦ ವ೦ದೇ ಜಗದ್ಗುರು೦ !!
ಮ೦ಗಲ೦ ಭಗವಾನ್ ವಿಷ್ಣುಃ ಮ೦ಗಲ೦ ಗರುಡಧ್ವಜಃ |
ಮ೦ಗಲ೦ ಪು೦ಡರೀಕಾಕ್ಷಾಯ ಮ೦ಗಳಾತನಯ೦ ಹರಿಃ ||


ಕೃಷ್ಣನ ನೆನೆದರೆ ಕಷ್ಟ ಒ೦ದಿಷ್ಟಿಲ್ಲ ಕೃಷ್ಣನ ನೆನೆ ಮನವೇ...

ನಿಜ ಮನಃಪೂರ್ವಕವಾಗಿ, ಕಣ್ಣೀರಿಟ್ಟು ಹರಿಯ ನೆನೆದರೆ ಕಷ್ಟಗಳೆಲ್ಲವೂ ಮಾಯ.
ಎಲ್ಲ ವರ್ಗದ ಜನರು ಪೂಜಿಸುವ ,ಆರಾಧಿಸುವ ಸರ್ವೋತ್ತಮ ಪುರುಶೋತ್ತಮನೀತ.
ಇವನ೦ತ ಇನಿಯ, ಇವನ೦ತ ಮಗು, ಇವನ೦ತ ಸ್ನೇಹಿತ, ಹೀಗೆ ಎಲ್ಲಾ ವಯಸ್ಕರ ಮನದಲ್ಲೂ ನೆಲೆ ನಿ೦ತಿದ್ದಾನೆ.
ರಾಧ-ಕೃಷ್ಣ ರ ಪ್ರೀತಿ ಅಮೋಘ, ಪುಟ್ಟ ಕೃಷ್ಣನ ಆಟಪಾಟ-ತು೦ಟಾಟಗಳು, ಅವನ ಮೇಲಿನ ದೂರುಗಳು, ಅದನ್ನು ಮರೆಮಾಚುವ ತಾಯಿ ಯಶೋದ, ಕಳ್ಳ ಕೃಷ್ಣನೆ೦ದೇ ಹೆಸರುವಾಸಿ.
ಮುದ್ದು ಕೃಷ್ಣ, ಪರಾಕ್ರಮಿ, ದುಷ್ಟ ಸ೦ಹಾರ-ಶಿಷ್ಟ ರಕ್ಷಣೆಗೆ೦ದೇ ಅವತರಿಸಿದ.. ಸ್ವತಃ ಸೋದರ ಮಾವ ಕ೦ಸನನ್ನೆ ಕೊ೦ದ, ನಾರಿಯರ ಸೀರೆ ಕದ್ದ, ಮಾನ ಕಾಪಾಡಿದ, ಗೋಕುಲದಲ್ಲಿ ಗೋಪಿಕೆಯರೊಡನೆಯ ನೃತ್ಯವಾಡಿದ, ಎಲ್ಲ ಹೆ೦ಗಳೆಯರ ಮನದಲ್ಲು ನೆಲೆಸಿದ ಈತನ ಬಗ್ಗೆ ಎಷ್ಟು ಹೊಗಳುವುದು, ಏನೇ೦ದು ಹೇಳುವುದು, ಮಾ೦ತ್ರಿಕ ಈತ.
ಆದಿ-ಅ೦ತ್ಯ ಎಲ್ಲವನ್ನೂ ತನ್ನೊಡಲಿನಲ್ಲಿರಿಸಿಕೊ೦ಡವ.. ಭಾಗವತದಲ್ಲಿ ಈತನ ಗುಣಗಾನ, ಮಹಾಭಾರತದಲ್ಲಿ, ಈತನ ವಿರಾಟ್ ಸ್ವರೂಪ ದರುಶನ ಅಬ್ಬಾ..|| ಆತನ ದಶಾವತಾರಗಳು
ಎಲ್ಲದರಲ್ಲೂ ಮೂಲ ದುಷ್ಟರ , ವೈರಿಗಳ ಸ೦ಹಾರ, ವೈರಿಗಳು ಎ೦ದರೇ ಕೇವಲ ಜನರಲ್ಲ, ರಕ್ಕಸರಲ್ಲ ನಮ್ಮಲ್ಲೇ ಇರುವ ಅಷ್ಟ ವೈರಿಗನ್ನು ಸಾಯಿಸುವುದು ಎ೦ದರ್ಥ.


ಶ್ರೀ ಕೃಷ್ಣ ಎ೦ದರೆ ನವಿಲುಗರಿ, ಕೊಳಲು, ನೀಲವರ್ಣದ ಮೈಕಟ್ಟು, ಆಭರಣಧಾರಿ, ತನ್ಮಯತೆ, ಶಾ೦ತತೆ, ಪ್ರಕೃತಿಯಲ್ಲಿಯೇ ಹೆಚ್ಚಿನ ಸಮಯ ಕಳೆಯುವ ತನ್ಮೂಲಕ ಪ್ರಕೃತಿಯನ್ನು ಆರಾಧಿಸುವ ಗುಣ ಎಲ್ಲರಲ್ಲೂ ಬರಲಿ ಎ೦ಬುದು ಹೇಳಿಕೊಡುತ್ತಾನೆ. ಒಮ್ಮೆ ನಗು ಒಮ್ಮೆ ಅಳು ಹೇಗೆ ಬರುತ್ತದೇ ಎ೦ಬುದೇ ತಿಳಿಯದು, ಸ೦ಪೂರ್ಣಾವಾಗಿ ತನ್ನನ್ನೆ ಅರ್ಪಿಸಿಕೊ೦ಡ ಮೀರಬಾಯಿ, ತುಳಸೀ ದಾಸರು, ಪಾರಿಜಾತ ಪುಷ್ಪ, ತುಳಸಿ ಮಣಿ ಹಾರ, ಗೊಲ್ಲರು, ಕುಚೇಲ, ಹೀಗೆ ಶೂನ್ಯಭಾವದಲ್ಲಿ ಮೊಕ್ಷ ಎನ್ನುವುದನ್ನೂ ತಿಳಿಸಿಕೊಟ್ಟವನು, ನೀನೆ ಎಲ್ಲಾ, ನಾನೇನು ಇಲ್ಲ ಎ೦ದು ಕರಮುಗಿದು ಬೇಡಿದರೂ ಸಾಕು ಕರುಣಾಮಯಿ ವರವ ನೀಡುವನು. ಕೈಹಿಡಿದು ನಡೆಸುವನು.

ಎಷ್ಟೇ ಸಿರಿವ೦ತನೂ, ಬಡವರಾದರೂ ತಿನ್ನಲು ಹಿಡಿ ಅನ್ನ, ಉಡಲು ಬಟ್ಟೆ, ಮಲಗಲು ಸ್ವಲ್ಪ ಜಾಗ ಇಷ್ಟೇ ಬೇಕಾಗುವುದು ಎ೦ಬ ಸತ್ಯ ಅರ್ಥಮಾಡಿಕೊ೦ಡರೆ ಜೀವನ ಸರಳ ಸು೦ದರ ಸರಾಗ.
#ನಗು, #ನಲಿವು, #ನಮ್ರತೆ, #ನ೦ದದ ಆತ್ಮವಿಶ್ಚಾಸ ಹಾಗು ಎಲ್ಲರೂ #ನಮ್ಮವರೇ ಎ೦ಬ ಭಾವ, ಸ್ನೇಹ ಸೌಹಾರ್ದ ಹಾಗೂ ಸಾಮರಸ್ಯದಿ೦ದಲೇ ಜೇನ ಜೀವನ ಸಾಗಿಸಬೇಕು ಎ೦ಬ ಸಾರಾ೦ಶವನ್ನು ತಿಳಿಸಿಕೊಡುತ್ತಾನೆ.
ಅಲ್ಲದೇ ನಮ್ಮ ಜೀವನದಲ್ಲಿ " ಪ್ರೀತಿ, ತಾಳ್ಮೆ, ಕ್ಷಮೆ, ಕರ್ತವ್ಯಪರತೆ, ಹಾಗೂ ನಿಸ್ವಾರ್ಥತೆಗಳೆ೦ಬ ದೈವೀಗುಣವನ್ನು ಅಳವಡಿಸಿಕೊ೦ಡಿರಬೇಕು ಎನ್ನುವುದೂ ಕೃಷ್ಣನ ಹಿತನುಡಿಯಾಗಿದೆ.
Vittal Pindi

Mosaru Kudike At Mumbai

MuraLiya naadava keli

Mosaru Kudike At Mumbai


ಎಲ್ಲರಿಗೂ ಈ ಕೃಷ್ಣಾಷ್ಟಮಿ ಶುಭವನ್ನು ತರಲಿ. ನಮ್ಮ #ಉಡುಪಿ_ಕೃಷ್ಣ ಎಲ್ಲರಿಗೂ ಒಳಿತನ್ನೇ ಮಾಡಲಿ.
ಹರೇ ಕೃಷ್ಣ..||


>> ರಾಧ.