Monday 3 April 2023

ಬೆಳಕಲಿ- Belakali song lyrics Hondisi bareyiri Kannada Movie



Google image source


ಬೆಳಕಲಿ- Belakali song lyrics Hondisi bareyiri Kannada Movie 


ಬೆಳಕಲಿ ಕಾಣದ ಇರುಳಿಗೂ

ಇರುಳಲೂ ಕಾಣುವ ಬೆಳಕಿಗೂ

ಆ ನಭ ಕೂಡ ಕಣ್ಮುಚ್ಚಿ ನೋಡುತ್ತಿರುವ ಈ ಸಮಯ

ಈ ಭವ ಕೂಡ ಕಣ್ಣೆತ್ತಿ ನೋಡುತ್ತಿರುವ ಈ ವಿಷಯ

//ಬೆಳಕಲಿ//


ನಿನ್ನ ಬದುಕೆ ನಿನ್ನೆಗಳಿಗೂ ನಾಳೆಗಳಿಗೂ ಉತ್ತರವು

ಸಹಜ ಬದುಕ ಸ್ವೀಕರಿಸೋ ರೂಪವೂ

ಇನ್ನು ಹೀಗೆ ನಿನ್ನ ಹಾಗೆ...

ನನ್ನ ದಿನಚರಿ... ಶುಭಾರಂಭವೂ...

ಈ ಹೆಣ್ಣು ಪೂಜಿಸೋ... 

ಈ ನೆಲದ ಗುಣಕೆ ಇವಳೇ ಕಾಣಿಕೆ// ಬೆಳಕಲಿ//


ಕಾಲದ ಕನ್ನಡಿಯಲಿ..

ಕಾಣದ ಮುನ್ನುಡಿ... ತಂದ ಬೆಳಕಿಗೆ..

ಕಡಲಲೆಯಲಿ ಗಿರಿತೊರೆಯಲಿ

ನಭ ನೆಲದಲಿ ಝೇಂಕಾರವು...

ಈ ಸಂಗಮವೇ ಸೃಷ್ಟಿ ಸಂಭ್ರಮ...

ಸೃಷ್ಟಿ ಬೆಸೆದ ಈ ಅನುಬಂಧಕೆ ಬೇಕಿಲ್ಲ ಯಾವ ಹೆಸರು

ಬದುಕಿ ಸುಮ್ಮನೆ...// ಬೆಳಕಲಿ//

**

ಹೊಂದಿಸಿ ಬರೆಯಿರಿ -ಸಿನೆಮಾ

ಜೋ. ಕೋಸ್ಟಾ - ಹಾಡಿದವರು

ರಾಮೇನಹಳ್ಳಿ‌ ಜಗನ್ನಾಥ- ರಚನೆ.

ನವೀನ್- ನಾಯಕನಟ

Raymo- Hodare hogu lyrics Kannada Movie song lyrics

 

Google image source


Raymo- Hodare hogu lyrics Kannada Movie song lyrics...


ಹೋದರೆ ಹೋಗು ರೇಮೊ ಸಿನೆಮಾ ಹಾಡಿನ ಸಾಹಿತ್ಯ


ಹೋದರೆ ಹೋಗು ಯಾರಿಗೆ ಬೇಕು

ಪ್ರೀತಿಗೆ ನಂದೊಂದು ಶ್ರದ್ಧಾಂಜಲಿ

ಜಾರದು ಒಂದು ಕಂಬನಿ ಬಿಂದು

ಎಂದಿಗೂ ನಿಂಗಾಗಿ ಕಣ್ಣಂಚಲಿ

ಹೃದಯ ಒಡದೇ ಇರಲಿ

ಇಂದೇ ಸೇರಿ ಬಿಡಲಿ

ನೊಂದೋರ ಸಾಲಲ್ಲಿ

ನಂದೊಂದು ಹೆಸರು

ನೊಂದೋರ ಸಾಲಲ್ಲಿ

ನಂದೊಂದು ಹೆಸರು//ಹೋದರೆ ಹೋಗು//


ಚೂರಿ ಚುಚ್ಚಿ ನೀ ಕೇಳುವೆ

ನೋವಾಯಿತೆ ನೋವಾಯಿತೆ

ಹಲ್ಲು ಕಚ್ಚಿ ನಾ ಹಾಡುವೆ ಗೊತ್ತಾಯಿತೆ ಗೊತ್ತಾಯಿತೆ

ಇಲ್ಲಿ ಮುಕ್ತಾಯ ಆಗಲಿ

ನಮ್ಮ ಕಥೆ ನಮ್ಮ ಕಥೆ

ಒಂದು ಹೆಜ್ಜೆನೂ ಹಾಕದೆ

ಇನ್ನೂ ಜೊತೆ ಇನ್ನೂ ಜೊತೆ

ನಿನ್ನ ತಪ್ಪು ಏನು ಇಲ್ಲ

ನಾನು ತಾನೆ ನಂಬಿದ್ದು

ನಂಬಿದಕ್ಕೇ ತಾನೆ ನಿಂಗೆ ಮೋಸ ಮಾಡೋಕ್ ಆಗಿದ್ದು

ನೊಂದೋರ ಸಾಲಲ್ಲಿ

ನಂದೊಂದು ಹೆಸರು //ಹೋದರೆ ಹೋಗು//


ಚೂರು ಅಭ್ಯಾಸ ಆದರೆ

ಒಂಟಿತನ ಒಂಟಿತನ

ಯಾರ ಹಂಗಿಲ್ಲ ಬಾಳುವೆ

ನನ್ನಂತೆ ನಾ ನನ್ನಂತೆ ನಾ

ಈಗ ಹುಡುಕೋದು ಎಲ್ಲಿದೆ

ನನ್ನನ್ನೇ ನಾ ನನ್ನನ್ನೇ ನಾ

ನಂಗೆ ಬೇಕೀಗ ನನ್ನದೇ

ಆಲಿಂಗನ ಆಲಿಂಗನ

ತುಂಬಾ ದೂರ ಬಂದ ಮೇಲು

ಹಿಂದೆ ತಿರುಗಿ ನೋಡಿಲ್ಲ

ನೀನು ಯಾರು ಅಂತ ನಾನು ಮರೆತೆ ಹೋದೆ ಸುಳ್ಳಲ್ಲ

ನೊಂದೋರ ಸಾಲಲ್ಲಿ

ನಂದೊಂದು ಹೆಸರು//ಹೋದರೆ ಹೋಗು//

***

ರೇಮೋ ಸಿನೆಮಾ

ಕವಿರಾಜ್ ಸಾಹಿತ್ಯ

ಶ್ರೇಯಾ ಗೋಶಾಲ್ ಹಾಡುದವರು.

ಸಂಗ್ರಹ..

Friday 28 October 2022

Auto Raja Shankar Nag Photos

 33rd Death Anniversary of Auto Raja Shankar Nag.

Some Photos November 9th 2022




















Puneeth Rajkumar ಪುನೀತ್ ರಾಜ್ ಕುಮಾರ್ ಅವರ ಸವಿನೆನಪಿಗಾಗಿ ಕವಿತೆ

                
       (Google source image)
((ಪುನೀತ್ ರಾಜಕುಮಾರ್ ಅವರ ಪ್ರಥಮ ಪುಣ್ಯತಿಥಿ..))
ನುಡಿನಮನ ಕವಿತೆ

ಶೀರ್ಷಿಕೆ : ಪುನೀತವಾಯಿತು ಈ ನೆಲ
🍁🍁🍁🍁🍁🍁🍁🍁🍁🍁
ಪುನೀತವಾಯಿತು ಕನ್ನಡದ ನೆಲ
ಗಂಧದ ಗುಡಿಯ ಸುತ್ತಿ ಬಂದಮೇಲೆ
ಅಪ್ಪು ಅಭಿ ಅರಸುವಾಗಿ
ಜನರ ಮನದಲಿ ನೆಲೆನಿಂತ ಮೇಲೆ

ಪುನೀತವಾಯಿತು ಕನ್ನಡದ ನೆಲ
ಬೆಟ್ಟದ ಹೂವನ್ನು ಅರಸಿಕೊಂಡು ಹೋದಮೇಲೆ
ಸಮಾಜಮುಖಿ ಕೆಲಸಗಳು ಒಂದೇ ಎರಡೇ
ಅಸಂಖ್ಯಾತವಾದ ಮೇಲೆ..
(Google source images)
**
ಬೇಸರದ ಛಾಯೆ ಎಲ್ಲೆಡೆ
ಅನುದಿನ ನೆನಪಿನಲ್ಲಿ ಬಂದು ಹೋಗುವ
ನಗುಮೊಗವೊಂದೀಗ ಮರೆಯಾದ ಮೇಲೆ
ಕಣ್ಣೀರಿನಲೇ ಅಭಿಷೇಕ, 
ಮುಗಿಬೀಳುವ ಜನಸಾಗರ
ಇದನ್ನು ತಡೆಯಲಾಗುವುದೇ ಹೇಳಿ??

'ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ'
ಎಂಬಂತೆ ಸದ್ಗುಣ, ವಿನಯತೆಯ
ಕಲಿಸಿಕೊಟ್ಟು ಹೊರಟುಹೋದ ಮೇಲೆ
ಬೇಸರದ ಛಾಯೆ ಎಲ್ಲೆಡೆ..
ಪರಮಾತ್ಮ ಪೃಥ್ವಿಯ ತೊರೆದ ಮೇಲೆ..
(Google Image Source)
***
ಆಕಾಶದಲ್ಲಿ ಹೊಳೆಯುತ್ತಿರುವ
ರಾಜರತ್ನವೊಂದು ಅನುದಿನ ಕಂಡಾಗಲೆಲ್ಲ
ಹೆಮ್ಮೆಯ ಭಾವವು ಮನದ ತುಂಬೆಲ್ಲ...

ಇದ್ದರೆ ಇರಬೇಕು ಪ್ರೀತಿಯ ದೊಡ್ಮನೆ ಹುಡುಗನಂತೆ
ನೀನೇ ಎಂದಿಗೂ ರಾಜಕುಮಾರನಂತೆ

ನಿನ್ನಲ್ಲಿರುವ ಪವರ್, ಜನರನ್ನು 
ಮೈತ್ರಿಗೊಳಿಸುವ ಹುಮ್ಮಸ್ಸು ಯಾರಿಗೂ ಬರದಯ್ಯ
ಲಕ್ಕಿ ಮ್ಯಾನ್ ನೀವಲ್ಲ, ನಿಮ್ಮ ಪಡೆದ ಕರುನಾಡಯ್ಯ....

- ಸಿಂಧು ಭಾರ್ಗವ, ಬೆಂಗಳೂರು
ಶುಭೋದಯ🌼🌿 ಶುಭದಿನ🌞
29/Oct/2022 Saturday

(Google Image source)


Tuesday 8 November 2016

ಲೇಖನ- ನಮ್ಮ ನೆನಪಿನಲ್ಲಿ ಶಂಕರ್ ನಾಗ್


(@@@)



(@@@)

ನಮ್ಮ ನೆನಪಿನಲ್ಲಿ ಶಂಕರ್ ನಾಗ್.. ಇಂದು ಅವರ ೬೨ನೇ ಜನ್ಮದಿನ.

"ನಗುವ ಗುಲಾಬಿ ಹೂವೇ." ಎಂದು ಆಟೋ ಶಂಕರ್ ಹಾಡು ಹಾಡುತ್ತಾ
ಪ್ರೀತಿಸಿ ಮದುವೆಯಾದವರು ಹೇಗೆ ಬದುಕಿತೋರಿಸಬೇಕು ಎಂಬುದನ್ನು "ಪರಮೇಶಿ ಪ್ರೇಮ ಪ್ರಸಂಗದಲ್ಲಿ" ಜನರಿಗೆ ಅರ್ಥೈಸುತ್ತಾ "ನೋಡಿ ಸ್ವಾಮಿ ನಾವ್ ಇರೋದು ಹೀಗೆ.." ಎಂಬ ನೇರನುಡಿಗಳಿಂದ ಬದುಕುತ್ತಾ,
"ಸತ್ತಮೇಲೆ ಮಲಗೋದು ಇದ್ದೇ ಇದೆ ಎದ್ದಿದ್ದಾಗ ಏನಾದರೂ ಸಾಧಿಸು" ಎಂದು ಯುವಕರ ಬೆನ್ನುತಟ್ಟಿ ಎಚ್ಚರಿಸುತ್ತಾ "ಆ್ಯಕ್ಸಿಡೆಂಟ್" ಆಗಿ ನಮ್ಮನ್ನೆಲ್ಲ ಅಗಲಿ ಈಗ "ಕೇಳದೇ ನಿಮಗೀಗ ದೂರದಲ್ಲಿ ಯಾರೋ..." ಎಂದು ಎಲ್ಲಾ ಅಭಿಮಾನಿಗಳ ಮನದಲ್ಲಿ ದಿನಕ್ಕೆ ಒಮ್ಮೆಯಾದರೂ ಅವರ ನೆನಪು ರಿಂಗಣಿಸುವಂತೆ ಮಾಡುತ್ತಿದ್ದಾರೆ.
- ಶಂಕರ್ ನಾಗ್.
***
ಅವರ ಅಣ್ಣ ಅನಂತ್ ನಾಗ್ ರವರು, ರಮೇಶ್ ಭಟ್, ಮಾ.ಮಂಜುನಾಥ್, ಅರುಂಧತಿನಾಗ್ ಎಲ್ಲರನ್ನೂ ಈ ದಿನ ನೆನಪಿಸಿಕೊಳ್ಳಬೇಕು. ಅವರೆಲ್ಲರೂ ಕಲೆಯನ್ನೇ ಉಸಿರನ್ನಾಗಿಸಿಕೊಂಡು ಬದುಕುತ್ತಾ ಇರುವವರು. ಶಂಕರ್ ನಾಗ್ ಅವರ  ಕಲ್ಪನೆಯ ಕೂಸು #ರಂಗಶಂಕರ ಎನ್ನುವ ದೊಡ್ಡ ರಂಗಭೂಮಿಯನ್ನು ಅವರ ಧರ್ಮಪತ್ನಿ ಅರುಂಧತಿನಾಗ್ ಅವರು ೨೦೦೪ರಲ್ಲಿ  ಪ್ರಾರಂಭಿಸಿದರು. ಅವರು ಈಗ ಇದ್ದಿದ್ದರೆ ಬೆಂಗಳೂರು ಅದೆಷ್ಟೋ ಬದಲಾವಣೆ ಕಾಣುತ್ತಿತ್ತು. ಆಗಿನ ಕಾಲದಲ್ಲೇ ಅವರು ಬೆಂಗಳೂರಿಗೆ ಮೆಟ್ರೋ ರೈಲಿನ ಬಗ್ಗೆ, ನಂದಿಬೆಟ್ಟಕ್ಕೆ ರೋಪ್_ವೇ ಮುಂತಾದ ಯೋಜನೆಗಳ ಕನಸನ್ನು ಕಂಡವರು. ಅವರು ಒಂದು ರೀತಿಯ ಕಿಡಿ(ಸ್ಪಾರ್ಕ್) ಅದು ಸಾಮಾನ್ಯದ್ದಲ್ಲ, ತಾನು ಬೆಳಗಿ ಇತರರಿಗೂ ಬೆಳಕು ನೀಡುವಂತದ್ದು.. ಜೊತೆಗಾಗರನ್ನು ಪ್ರೀತಿಸುವ ,ಕಾಳಜಿ ತೋರಿಸುವ ಎಲ್ಲರನ್ನೂ ಬಡಿದೆಬ್ಬಿಸಿ ಜೊತೆಗೆ ನಡೆಸುವ ಕಲೆ ಹಾಗೂ ಹುಮ್ಮಸ್ಸು ಅವರಲ್ಲಿತ್ತು. ಅಹಂ ಅನ್ನುವ ಪದವೇ ಅವರ ಡಿಕ್ಷನರಿ ಯಲ್ಲಿ ಇರಲಿಲ್ಲ ,ರಂಗಭೂಮಿ ಸಿನೆಮಾ ಎರಡರಲ್ಲಿಯೂ ತೊಡಗಿಸಿಕೊಂಡ
ದಣಿವರಿಯದ ದೇಹ ಎಂದು ಅವರ ಒಡನಾಡಿಗಳ ಮನದನಿ..

- ಸಿಂಧುಭಾರ್ಗವ್ .ಬೆಂಗಳೂರು

Friday 4 November 2016

Mukunda Murari v/s Santu Straight Forward Movie Review

(*****)

೧) "ಎಲ್ಲಾ ಧರ್ಮಕ್ಕಿಂತಲೂ ಶ್ರೇಷ್ಠವಾದ ಧರ್ಮ "  #ಮನುಷ್ಯತ್ವದ_ಧರ್ಮವಾಗಿದೆ.
- ಕೃಷ್ಣ ಉವಾಚ. :) 

 ೨) ಮೋಹ ಮೂಡಿದಾಗ ಮೋಡಕೆ
ಹೊತ್ತು ಗೊತ್ತು ಹೋಗಿ ಪಕ್ಕಕೆ
ಮಳೆಯ ಚುಂಬನ... ಸಾಗರಕೆ
****
"ಮುಕುಂದ ಮುರಾರಿ" ಮತ್ತು "ಸಂತು ಸ್ಟ್ರೇಟ್ ಫಾರ್ವರ್ಡ್" ಎರಡೂ ಸಿನಿಮಾಗಳು ತನ್ನದೇ ಆದ  ಕಥಾವಸ್ತುವಿನಿಂದ ಜನರ ಮನಸ್ಸನ್ನು ಗೆದ್ದಿದೆ. ಸಂಸಾರ ಸಮೇತರಾಗಿ ಬಂದು ಒಂದು ಅಪರೂಪದ ಅದ್ಭುತ ಕತೆಯಿರುವ ಸಿನೆಮಾವನ್ನು ನೋಡಿ ಆನಂದಿಸಬಹುದು. ಎಲ್ಲಿಯೂ ಮುಜುಗರ ಹುಟ್ಟಿಸುವಂತಹ ಸಂಭಾಷಣೆಯಾಗಲಿ, ದೃಶ್ಯವಾಗಲಿ ಹುಡುಕಿದರೂ ಕಾಣ ಸಿಗುವುದಿಲ್ಲ. ಅಲ್ಲದೇ ಹಾಸ್ಯದೃಶ್ಯಗಳನ್ನು ತಂದು ಬಲವಂತವಾಗಿ ಕೂರಿಸಿಲ್ಲ. ಅದೇ ವಿಶೇಷ. ಪ್ಲಸ್ ಪಾಂಯ್ಟ್ . ಎರಡೂ ಸಿನೆಮಾದ  ಹಾಡುಗಳೆಲ್ಲವೂ ಜನರ ಕಿವಿಯಲ್ಲಿ ಗುಂಯ್ಗುಡುತ್ತಿವೆ.. ಮುಕುಂದ ಮುರಾರಿ ಸಿನಿಮಾದಲ್ಲಿ ಕೃಷ್ಣ ಮತ್ತು ನಾಸ್ತಿಕನ ನಡುವಿನ ಸಂಭಾಷಣೆ ಕೇಳಲು ಮುದನೀಡುತ್ತದೆ. ಹಿರಿಯರನ್ನು ಕರೆದುಕೊಂಡುಹೋಗಿ ಸಿನೆಮಾ ನೋಡಬಹುದು. ಅಲ್ಲದೇ ಎರಡು ಸಿನಿಮಾಗಳನ್ನು ಹೋಕಿಸಿ ನೋಡುವುದು ಗೊಂದಲ ಮೂಡುವಂತಹ ಹೇಳಿಕೆ ನೀಡುವುದು ಸರಿಯಲ್ಲ. ಎರಡರ ಕತೆ /ಕಥಾವಸ್ತು ಬೇರೆಯೇ..
**
ಮಹೇಶ್ ರಾವ್ ನಿರ್ದೇಶನದ ಯಶ್ ,ರಾಧಿಕಾ ಪಂಡಿತ್ ಹಾಗೂ ಶ್ಯಾಮ್ ಅಭಿನಯದ #ಸಂತು ಸ್ಟ್ರೇಟ್ ಫಾರ್ವರ್ಡ್ ಸಿನಿಮಾ ಮತ್ತು ನಂದಕಿಶೋರ್ ನಿರ್ದೇಶನದ ಬಹುತಾರಾಗಣವಿರುವ, ಅಲ್ಲದೇ ವಿಶೇಷವಾಗಿ ಸುದೀಪ್ ,ಉಪೇಂದ್ರ ರವರು ಜೊತೆಯಾಗಿ ನಟಿಸಿರುವ #ಮುಕುಂದ_ಮುರಾರಿ ಸಿನೇಮಾ ಯಾರು ಇನ್ನೂ ನೋಡದವರು ಥಿಯೇಟರ್ ಗೆ ಹೋಗಿ ನೋಡಿ ಬನ್ನಿ..
ನೂರು ದಿನವನ್ನು ಯಶಸ್ವಿಯಾಗಿ ಪೂರೈಸಲಿ ಎಂದು ಹರಸುವೆ..
ಮು.ಮು = ೦೭.೫/೧೦
ಸಂತು = ೦೭/೧೦

- ಸಿಂಧುಭಾರ್ಗವ್ .ಬೆಂಗಳೂರು