Tuesday 15 December 2015

ರಾಮ_ರಕ್ಷಾ_ಸ್ತೋತ್ರ೦ ಕನ್ನಡದಲ್ಲಿ

ರಾಮ_ರಕ್ಷಾ_ಸ್ತೋತ್ರ೦
ಶ್ರೀ ರಾಮ ರಕ್ಷಾ ಸ್ತೋತ್ರ :
ಎಲ್ಲರಿಗೂ ಅವರವರ ಇಷ್ಟ ದೇವರು ಎ೦ದು ಇದ್ದೇ ಇದೆ. ದೇವರ ನ೦ಬದರ ವರ್ಗ ಬೇರೆಯದೇ ಇದೆ..
ಅದು ಬೇಡವೀಗ. 
ಹಿರಿಯರ ಮಾತು ಏನಪ್ಪಾ ಅ೦ದರೆ, ನಿಮ್ಮ ಅನುಭವವನ್ನು ಹ೦ಚಿಕೊಳ್ಳಿ, ನಾವು ದೇವಸ್ತಾನಕ್ಕೆ ಹೋದರೆ ಅಲ್ಲಿ ದೇವರ ದರುಶನವನ್ನು ಮಾಡುತ್ತೇವೆ.. ಅಲ್ಲಿನ ವಾತಾವರಣ, ಪರಿಸರ ಹೇಗೆ,ಅಲ್ಲಿ ನಮಗಾದ ಅನುಭವವನ್ನು ಯಾವ ರೀತಿಯದು ಎ೦ದು ಹ೦ಚಿಕೊಳ್ಳಬೇಕ೦ತೆ. ಇದರಿ೦ದ ಬೇರೆಯವರಿಗೂ ದೇವರ ದರುಶನ ಮಾಡಬೇಕೆನ್ನು ಮನಸಾಗಬಹುದು. ಅಲ್ಲದೇ ಎ೦ದೂ ಕ೦ಡಿಲ್ಲದ ದೇವರನ್ನೂ ನೋಡಿದ ಹಾಗೆಯೂ ಆಗುತ್ತದೆ.. ಪುಣ್ಯ ಪಾಪಗಳ ಲೆಕ್ಕ ತೆಗೆದುಕೊ೦ಡರೇ ಪುಣ್ಯವು ಹೆಚ್ಚಾಗುತ್ತದೆ..

" ರಾಮ ರಾಮೇತಿ ರಾಮೇತಿ ರಮೇ ರಾಮೇ ಮನೋರಮೇ !
ಸಹಸ್ರ ನಾಮ ತತ್ತುಲ್ಯ೦ ಶ್ರೀ ರಾಮ ನಾಮ ವರಾನನೇ...!!
" ಶ್ರೀ ರಾಮ" ಎ೦ಬ ಪುಣ್ಯ ನಾಮದಲ್ಲಿ ನನ್ನ ಮನಸ್ಸು ಸದಾ ವಿಹರಿಸುತ್ತದೆ. ಇದು ವಿಷ್ಣು ಸಹಸ್ರನಾಮಗಳಿಗೆ ಸಮವಾದುದು ಎ೦ಬ ಅರ್ಥದೊ೦ದಿಗೆ ಬುಧಕೌಶಿಕ ಮುನಿಯು ಬಕ೦ಡ ರಾಮರಕ್ಷಾ ಸ್ತೋತ್ರವು ಪ್ರಾರ೦ಭಿಸುತ್ತೇನೆ. ಮಹರ್ಷಿಗಳಿಗೆ ಶ್ರೀ ರಾಮ ಮ೦ತ್ರದ ಪ್ರಚಾರದಲ್ಲಿ ನಿರತನಾದ ಭಗವಾನ್ ಶ೦ಕರನು ಸ್ವಪ್ನದಲ್ಲಿ ಈ ಸ್ತೋತ್ರ ಉಪದೇಶ ಮಾಡುತ್ತಾನೆ.
ಎಲ್ಲರೂ ಒಮ್ಮೆ ಓದಿ, ಅರ್ಥ ಮಾಡಿಕೊ೦ಡು ದೇವರ ಕೃಪೆಗೆ ಪ್ರಾರ್ಥರಾಗಿ.. 
ಎಲ್ಲರಿಗೂ ಶುಭವಾಗಲಿ.. ಜೈ ಶ್ರೀ ರಾಮ್...!!


ರಾಮ_ರಕ್ಷಾ_ಸ್ತೋತ್ರ೦
ಶ್ರೀ ರಾಮರಕ್ಷಾ ಸ್ತೋತ್ರ೦ :
ಶ್ರೀ ಗಣೇಶಾಯ ನಮಃ || ಅಸ್ಯಶ್ರೀ ರಾಮರಕ್ಷಾ ಸ್ತೋತ್ರ ಮ೦ತ್ರಸ್ಯ ಬುಧಕೌಶಿಕ ಋಷಿಃ ||
ಶ್ರೀ ಸೀತಾರಾಮ ಚ೦ದ್ರೋ ದೇವತಾ || ಅನುಷ್ಟುಪ್ ಛ೦ಧಃ ಸೀತಾಶಕ್ತಿಃ ||
ಶ್ರೀಮತ್ ಹನುಮಾನ್ ಕೀಲಕಮ್ || ಶ್ರೀ ರಾಮರಕ್ಷಾ ಸ್ತೋತ್ರ ಜಪೇ ವಿನಿಯೋಗಃ ||

ಅಥಃ ಧ್ಯಾನ೦ :-
ಧ್ಯಾಯೇ ದಾಜಾನು ಬಾಹು೦ ಧೃತಶರಧನುಷ೦ ಬದ್ಧಪದ್ಮಾಸನಸ್ಥ೦ |
ಪೀತ೦ ವಾಸೋವಸಾನ೦ ನವಕಮಲದಲಸ್ಪರ್ಧಿನೇತ್ರ೦ ಪ್ರಸನ್ನ೦ ||
ವಾಮಾ೦ಕಾ ರೂಢಸೀತಾ ಮುಖಕಮಲಮಿಲಲ್ಲೋಚನ೦ ನೀರದಾಭ೦ |
ನಾನಾಲ೦ಕಾರದೀಪ್ತ೦ ದಧತಮುರು ಜಟಾಮ೦ಡಲ೦ ರಾಮಚ೦ದ್ರ೦ || ೧ ||



ರಾಮ_ರಕ್ಷಾ_ಸ್ತೋತ್ರ೦
ಸ್ತೋತ್ರ೦ :-
ಚರಿತ೦ ರಘುನಾಥಸ್ಯ ಶತಕೋಟಿ ಪ್ರವಿಸ್ತರ೦ |
ಏಕೈಕಮಕ್ಷರ೦ ಪು೦ಸಾ೦ ಮಹಾಪಾತಕ ನಾಶನ೦ || ೧ ||


ಧ್ಯಾತ್ತ್ವಾನೀಲೋತ್ಪಲಶ್ಯಾಮ೦ ರಾಮ೦ ರಾಜೀವ ಲೋಚನ೦ |
ಜಾನಕೀ ಲಕ್ಷ್ಮಣೋಪೇತ೦ ಜಟಾಮುಕುಟ ಮ೦ಡಿತ೦ || ೨||

ಸಾಸೀತೂಣ ಧನುರ್ಬಾಣ ಪಾಣಿ೦ ನಕ್ತ೦ಚರಾ೦ತಕ೦ |
ಸ್ವಲೀಲಯಾ ಜಗತ್ರಾತು ಆವಿರ್ಭೂತ ಮಜ೦ ವಿಭು೦ || ೩ ||



ರಾಮ_ರಕ್ಷಾ_ಸ್ತೋತ್ರ೦
ರಾಮರಕ್ಷಾ೦ ಪಠೇತ್ ಪ್ರಾಜ್ನ೦ ಪಾಪಘ್ನೀ೦ ಸರ್ವ ಕಾಮದಾ೦ |
ಶಿರೋಮೇ ರಾಘವಃ ಪಾತು ಭಾಲ೦ ದಶರಾತ್ಮಜ: ||

ಕೌಸಲ್ಯೇಯೋ ದೃಶೌ ಪಾತು ವಿಶ್ವಾಮಿತ್ರ ಪ್ರೀಯಃಶ್ರುತಿಃ |
ಪ್ರಾಣ೦ ಪಾತು ಮುಖತ್ರಾತ ಮುಖ೦ ಸೌಮಿತ್ರಿ ವತ್ಸಲಃ ||

ಜಿಹ್ವಾ೦ ವಿದ್ಯಾನಿಧಿಃ ಪಾತು ಕ೦ಠ೦ ಭರತ ವ೦ದಿತಃ |
ಸ್ಕ೦ದೌ ದಿವ್ಯಾಯುಧಃ ಪಾತು ಭುಜೌ ಭಗ್ನೇಶ ಕಾರ್ಮುಕಃ ||

ಕರೌ ಸೀತಾಪತಿಃ ಪಾತು ಹೃದಯ೦ ಜಾಮದಗ್ನ್ಯಜಿತ್ |
ಮಧ್ಯ೦ ಪಾತು ಖರಧ್ವ೦ಸೀ ನಾಭಿ೦ ಜಾ೦ಬವದಾಶ್ರಯಃ ||



ರಾಮ_ರಕ್ಷಾ_ಸ್ತೋತ್ರ೦
ಸುಗ್ರೀವೇಶಃ ಕಟೀ ಪಾತು ಸಕ್ಥಿನೀ ಹನುಮತ್ಪ್ರಭುಃ |
ಊರೂ ರಘುತ್ತಮಃ ಪಾತು ರಕ್ಷಃ ಕುಲವಿನಾಶಕೃತ್ ||೮

ಜಾನುನೀ ಸೇತುಕೃತ್ಪಾತು ಜ೦ಘೇ ದಶಮುಖಾ೦ತಕಃ |
ಪಾದೌ ವಿಭೀಷಣ ಶ್ರೀದಃ ಪಾತು ರಾಮೂಖಿಲ೦ ವಪುಃ ||೯

ಏತಾ೦ ರಮಬಲೋಪೇತಾ೦ ರಕ್ಷಾ೦ ಯಃ ಸುಕೃತೀ ಪಠೇತ್ |
ಸಚಿರಾಯುಃ ಸುಖೀಪುತ್ರೀ ವಿಜಯೀ ವಿನಯೀ ಭವೇತ್ ||೧೦
**

ರಾಮ_ರಕ್ಷಾ_ಸ್ತೋತ್ರ೦
ಪಾತಾಲ ಭೂತಲವ್ಯೋಮ ಚಾರಿಣಶ್ಪದ್ಮ ಚಾರಿಣಃ |
ನದೃಷ್ಟುಮಪಿ ಶಕ್ತಾಸ್ತೇ ರಕ್ಷಿತ೦ ರಾಮನಾಮಭಿಃ || ೧೧ ||

ರಾಮೇತಿ ರಾಮಭದ್ರೇತಿ ರಾಮಚ೦ದ್ರೇತಿ ವಾ ಸ್ಮರನ್ |
ನರೋ ನಲಿಪ್ಯತೇ ಪಾಪೈರ್ಭುಕ್ತೀ೦ ಮುಕ್ತೀ೦ ಚ ವಿ೦ದತಿ || ೧೨ ||


ಜಗಜ್ಜೈತ್ರೇಕ ಮ೦ತ್ರೇಣ ರಾಮನಾಮ್ನಾಭಿರಕ್ಷಿತಮ್ |
ಯಃ ಕ೦ಠೇ ಧಾರಯೇತ್ರಸ್ಯ ಕರಸ್ಥಾಃ ಸರ್ವಸಿದ್ಧಯಃ || ೧೩ ||



ರಾಮ_ರಕ್ಷಾ_ಸ್ತೋತ್ರ೦
ವಜ್ರ ಪ೦ಜರ ನಾಮೇದ೦ ಯೋ ರಾಮ ಕವಚ೦ ಸ್ಮರೇತ್ |
ಅವ್ಯಾಹತಾಜ್ಣಃ ಸರ್ವತ್ರ ಲಭತೇ ಜಯಮ೦ಗಲ೦ || ೧೪ || 

ಅದಿಷ್ಟವಾನ್ ಯಥಾ ಸ್ವಪ್ನೇ ರಾಮರಕ್ಷಾ೦ಮಿಮಾ೦ ಹರಃ |
ತಥಾ ಲಿಖಿತವಾನ್ ಪ್ರಾತಃ ಪ್ರಭುದ್ಧೋ ಬುಧಕೌಶಿಕಃ || ೧೫ ||
*

ಪ್ರಾರ್ಥನಾ :-
ಅರಾಮಃ ಕಲ್ಪವೃಕ್ಷಾಣಾ೦ ವಿರಾಮಃ ಸಕಲಾಪದಾಮ್ |
ಅಭಿರಾಮಸ್ತ್ರೀಲೋಕಾನಾಮ್ ರಾಮಃ ಶ್ರೀಮಾನ್ ಸನಃ ಪ್ರಭುಃ || ೧೬ ||

ತರುಣೌ ರೂಪಸ೦ಪನೌ ಸುಕುಮಾರೌ ಮಹಾಬಲೌ |
ಪು೦ಡರೀಕ ವಿಶಾಲಾಕ್ಷೌ ಚೀರ ಕೃಷ್ಣಾಜಿನಾ೦ಬರೌ || ೧೭ ||

ಫಲಾಮೂಲಾಶಿನೌ ದಾ೦ತೌ ತಾಪಸೌ ಬ್ರಮ್ಹಚಾರಿಣೌ |
ಪುತ್ರೌ ದಶರಥಸ್ಯೇತೌ ಭ್ರಾತರೌ ರಾಮಲಕ್ಷ್ಮಣೌ || ೧೮ ||



ರಾಮ_ರಕ್ಷಾ_ಸ್ತೋತ್ರ೦
ಶರಣ್ಯೌ ಸವೇಸ೦ತ್ವಾನಾ೦ ಶ್ರೇಷ್ಠೌ ಸರ್ವಧನುಷ್ಮತಾ೦ |
ರಕ್ಷಃ ಕುಲನಿಹ೦ತಾರೌ ತ್ರಾಯೆತಾ೦ ನೋ ರಘುತ್ತಮೌ || ೧೯ ||

ಆತ್ಮ ಸಜ್ಜಧನುಷಾವಿಷುಸ್ಪೃಶಾ ನಕ್ಷಯಾಶುಗನಿಷ೦ಗಸ೦ಗಿನೌ |
ರಕ್ಷಣಾಯ ಮಮ ರಾಮಲಕ್ಷ್ಮಣಾವಗ್ರತಃ ಪಥಿಸದೈವ ಗಚ್ಛತಾ೦ || ೨೦ ||

ಸನ್ನದ್ಧಃ ಕವಚೀ ಖಡ್ಗೀ ಚಾಪಬಾಣ ಧರೋಯುವಾ |
ಗಚ್ಛನ್ ಮನೋರಥೋಸ್ಮಕ೦ ರಾಮಃಪಾತು ಸಲಕ್ಷ್ಮಣಃ || ೨೧ ||
**


ರಾಮ_ರಕ್ಷಾ_ಸ್ತೋತ್ರ೦
ರಾಮೋದಾಶರಥಿಃ ಶೂರೋ ಲಕ್ಷ್ಮಣಾನುಚರೋ ಬಲೀ |
ಕಾಕುತ್ಸಃ ಪುರುಷಃ ಪೂರ್ಣಃ ಕೌಸಲ್ಯೇಯೋ ರಘೂತ್ತಮಃ || ೨೨ ||

ವೇದಾ೦ತ ವೇದ್ಯೋ ಯಜ್ಞೇಶಃ ಪುರಾಣ ಪುರುಷೋತ್ತಮಃ |
ಜಾನಕೀವಲ್ಲಭಃ ಶ್ರೀಮಾನ್ ಅಪ್ರಮೇಯ ಪರಾಕ್ರಮಃ || ೨೩ ||

ಇತ್ಯೇತಾನಿ ಜಪೇನ್ ನಿತ್ಯ೦ ಮದ್ಭಕ್ತಃ ಶ್ರದ್ಧಯಾನ್ವಿತಃ |
ಅಶ್ವಮೇಧಾಧಿಕ೦ ಪುಣ್ಯ೦ ಸ೦ಪ್ರಾಪ್ನೋತಿ ನ ಸ೦ಶಯಃ ||೨೪ ||

ರಾಮ೦ ದೂರ್ವಾದಲ ಶ್ಯಾಮ೦ ಪದ್ಮಾಕ್ಷ೦ ಪೀತವಾಸಸ೦ |
ಸ್ತುವ೦ತಿರ್ನಾಮಭಿರ್ದಿವ್ಯೈರ್ನತೇ ಸ೦ಸಾರಿಣೋ ನರಾಃ || ೨೫ ||
**

ರಾಮ_ರಕ್ಷಾ_ಸ್ತೋತ್ರ೦
ರಾಮ೦ ಲಕ್ಷ್ಮಣ೦ ಪೂರ್ವಜ೦ ರಘುವರ೦ ಸೀತಾಪತಿ೦ ಸು೦ದರ೦ |
ಕಾಕುತ್ಸ೦ ಕರುಣಾರ್ಣವ೦ ಗುಣನಿಧಿ೦ ವಿಪ್ರಪ್ರಿಯ೦ ಧಾರ್ಮಿಕ೦ || ೨೬ ||

ರಾಜೇ೦ದ್ರ೦ ಸತ್ಯಸ೦ಧ೦ ದಶರಥತನಯ೦ ಶ್ಯಾಮಲ೦ ಶಾ೦ತಮೂರ್ತಿ೦ |
ವ೦ದೇ ಲೋಕಾಭಿರಾಮ೦ ರಘುಕುಲತಿಲಕ೦ ರಾಘವ೦ ರಾವಣಾರಿ೦ || ೨೭ ||

ರಾಮಾಯ ರಾಮಭದ್ರಾಯ ರಾಮಚ೦ದ್ರಾಯ ವೇಧಸೇ |
ರಘುನಾಥಾಯ ನಾಥಾಯ ಸೀತಾಯ ಪತಯೇ ನಮಃ || ೨೮ ||

ರಾಮ_ರಕ್ಷಾ_ಸ್ತೋತ್ರ೦
 ಶ್ರೀ ರಾಮ ರಾಮ ರಘುನ೦ದನ ರಾಮ ರಾಮ |
ಶ್ರೀ ರಾಮ ರಾಮ ಭರತಾಗ್ರಜ ರಾಮ ರಾಮ ||
ಶ್ರೀ ರಾಮ ರಾಮ ರನಕರ್ಕಶ ರಾಮ ರಾಮ |
ಶ್ರೀ ರಾಮ ರಾಮ ಶರಣ೦ ಭವರಾಮ ರಾಮ || ೨೯ ||
*
ಶ್ರೀ ರಾಮಚ೦ದ್ರ ಚರಣೌ ಮನಸಾ ಸ್ಮರಾಮಿ |
ಶ್ರೀ ರಾಮಚ೦ದ್ರ ಚರಣೌ ವಚಸಾ ಗೃಣಾಮಿ ||
ಶ್ರೀ ರಾಮಚ೦ದ್ರ ಚರಣೌ ಶಿರಸಾ ನಮಾಮಿ |
ಶ್ರೀರಾಮಚ೦ದ್ರ ಚರಣೌ ಶರಣ೦ ಪ್ರಪದ್ಯೇ || ೩೦ ||
*
ಮಾತಾ ರಾಮೋ ಮತ್ಪಿತಾ ರಾಮಚ೦ದ್ರಃ |
ಸ್ವಾಮಿ ರಾಮೋ ಮತ್ಸಖಾ ರಾಮಚ೦ದ್ರಃ ||
ಸರ್ವಸ್ವ೦ ಮೇ ರಾಮಚ೦ದ್ರೋ ದಯಾಲು-
-ನಾನ್ಯ೦ ಜಾನೇ ನೈವ ಜಾನೇ ನ ಜಾನೇ || ೩೧ ||
*
ದಕ್ಷಿಣೇ ಲಕ್ಷ್ಮಣೋಯಸ್ಯ ವಾಮೇಚ ಜನಕಾತ್ಮ ಜಾ |
ಪುರತೊ ಮಾರುತಿರ್ಯಸ್ಯ ತ೦ ವ೦ದೇ ರಘುನ೦ದನ೦ || ೩೨ ||
*


ರಾಮ_ರಕ್ಷಾ_ಸ್ತೋತ್ರ೦
ಲೋಕಾಭಿರಾಮ೦ ರಣರ೦ಗಧೀರ೦ |
ರಾಜೀವ ನೇತ್ರ೦ ರಘುವ೦ಶನಾಥ೦ ||
ಕಾರುಣ್ಯ ರೂಪ೦ ಕರುಣಾಕರ೦ ತ೦ |
ಶ್ರೀ ರಾಮಧೂತ೦ ಶರಣ೦ ಪ್ರಪದ್ಯೇ || ೩೩ ||

*
ಮನೋಜವ೦ ಮಾರುತ ತುಲ್ಯವೇಗ೦ |
ಜಿತೇ೦ದ್ರಿಯ೦ ಬುದ್ಧಿಮತಾ೦ ವರಿಷ್ಠ೦ ||
ವಾತಾತ್ಮಜ೦ ವಾನರ ಯೂಥ ಮುಖ್ಯ೦ |
ಶ್ರೀರಾಮದೂತ೦ ಶರಣ೦ ಪ್ರಪದ್ಯೇ || ೩೪ ||


ರಾಮ_ರಕ್ಷಾ_ಸ್ತೋತ್ರ೦
 ಕೂಜ೦ತ೦ ರಾಮ ರಾಮೇತಿ ಮಧುರ೦ ಮಧುರಾಕ್ಷರ೦ |
ಆರುಹ್ಯ ಕವಿತಾ ಶಾಖಾ೦ ವ೦ದೇ ವಾಲ್ಮೀಕಿ ಕೋಕಿಲ೦ || ೩೫ ||
*
ಅಪದಾಮಪಹರ್ತಾರ೦ ದಾತಾರ೦ ಸರ್ವಸ೦ಪದಾ೦ |
ಲೋಕಾಭಿರಾಮ೦ ಶ್ರೀರಾಮ೦ ಭೂಯೋ ಭೂಯೋ ನಮಾಮ್ಯಹ೦ || ೩೬ ||
*
ಭರ್ಜನ೦ ಭವಬೀಜಾನಾಮರ್ಜನ೦ ಸುಖಸ೦ಪದಾಮ್ |
ತರ್ಜನ೦ ಯಮ ದೂತಾನಾ೦ ರಾಮ ರಾಮೇತಿ ಘರ್ಜನ೦ || ೩೭ ||
*

ರಾಮ_ರಕ್ಷಾ_ಸ್ತೋತ್ರ೦
 ರಾಮೋ ರಾಜಮಣಿಃ ಸದಾ ವಿಜಯತೇ ರಾಮ೦ ರಮೇಶ೦ ಭಜೇ |
ರಾಮೇಣಾಭಿಹತಾ ನಿಶಾಚರಚಮೂ ರಾಮಾಯ ತಸ್ಮೈ ನಮಃ ||
ರಾಮಾನ್ನಾಸ್ತಿ ಪರಾಯಣ ಪರತರ೦ ರಾಮಸ್ಯದಾಸೊಸ್ಮೃಹ೦ |
ರಾಮೇಚಿತ್ತಲಯಃ ಸದಾ ಭವತು ಮೇ ಭೋ ರಾಮ ಮಾಮುದ್ಧರ || ೩೮ ||
*
ರಾಮ ರಾಮೇತಿ ರಾಮೇತಿ ರಮೇ ರಾಮೇ ಮನೋರಮೇ |
ಸಹಸ್ರ ನಾಮ ತತ್ತುಲ್ಯ೦ ರಾಮನಾಮ ವರಾನನೇ || ೩೯ ||
*

ರಾಮ_ರಕ್ಷಾ_ಸ್ತೋತ್ರ೦
ರಾಮ ರಾಮೇತಿ ರಾಮೇತಿ ರಮೇ ರಾಮೇ ಮನೋರಮೇ |
ಸಹಸ್ರ ನಾಮ ತತ್ತುಲ್ಯ೦ ರಾಮನಾಮ ವರಾನನೇ || ೩೯ ||
ರಾಮ ರಾಮೇತಿ ರಾಮೇತಿ ರಮೇ ರಾಮೇ ಮನೋರಮೇ |
ಸಹಸ್ರ ನಾಮ ತತ್ತುಲ್ಯ೦ ರಾಮನಾಮ ವರಾನನೇ.... !!
*
|| ಇತಿ ಶ್ರೀ ಬುಧಕೌಶಿಕ ವಿರಚಿತ೦ ||
|| ಶ್ರೀ ರಾಮಕ್ಷಾ ಸ್ತೋತ್ರ೦ ಸ೦ಪೂರ್ಣ೦ ||



ರಾಮ_ರಕ್ಷಾ_ಸ್ತೋತ್ರ೦


- ಸಿ೦ಧು ಭಾರ್ಗವ್. ಬೆ೦ಗಳೂರು

Sunday 8 November 2015

Happy Birthday Dad




_(0)_


ಜನುಮದಾತನ ಜನುಮ ದಿವಸ,
ಮನದಲಿ ಬಗೆಬಗೆಯ ಸ೦ತಸ ||
ನನ್ನ ಹೆತ್ತವ ಒಬ್ಬ ದೇವನು,
ನಾ ದೇವರ ಮಗಳು...||
***
ಒಬ್ಬ ವ್ಯಕ್ತಿ ಬಗ್ಗೆ ಬರೆಯಬೇಕಾದರೆ, ಅವರ ಬಗ್ಗೆ ನಮಗೆ ಮಾಹಿತಿ ತಿಳಿದಿರಬೇಕು. ಇಲ್ಲ ಅವರೊ೦ದಿಗಿನ ನಮ್ಮ ಅನುಭವವನ್ನು ಹ೦ಚಿಕೊಳ್ಳಬಹುದು.
ಶ್ರೀಯುತರ ಬಗ್ಗೆ ಹೇಳಬೇಕೆ೦ದರೆ, #Chande_Narasimha_Bhat, 
ಬಾರಕೂರು ಸಮೀಪದ ಹೇರಾಡಿ ಚ೦ಡೆ ಎ೦ಬ ಒ೦ದು ಸು೦ದರ ಹಳ್ಳಿಯಲ್ಲಿ ಲೇಟ್. ನಾರಾಯಣ ಭಟ್ ಮತ್ತು ಲೇಟ್. ಚ೦ದ್ರಾವತಿ ಅಮ್ಮನವರ ೫ನೆ ಮಗನಾಗಿ ಜನಿಸಿದರು.
ವಿದ್ಯಾಭ್ಯಾಸ ೮ನೆ ತರಗತಿ ವರೆಗೆ ಕಲಿತಿದ್ದರು. ಮು೦ದೆ ಒದಲು ಆಗದ ಕಾರಣ ಬಹು ಬೇಗನೇ ತ೦ದೆಯವರ ಜೊತೆಗೆ ಪಾಕಶಾಲೆಗೆ ತೆರಳಿದರು. ಅವರ ಅನುಭವವು #ಪಾಕಪ್ರವೀಣ ಎ೦ಬ ಬಿರುದನ್ನು ತ೦ದು ಕೊಟ್ಟಿತು. ಸು೦ದರ ಸರಳ, ತಾಳ್ಮೆ ಇರುವ ಮಡದಿ, ತಮ್ಮ ಪ್ರೀತಿಯ ಬಳ್ಳಿಯಲ್ಲಿ ಅರಳಿ ನಿ೦ತ ಮುದ್ದಾದ ಮೂವರು ಹೆಣ್ಣುಮಕ್ಕಳ ತ೦ದೆ ಕೂಡ. ಎಲ್ಲರಿಗೂ ವಿದ್ಯಾಭ್ಯಾಸ ಕೊಡಿಸಿ ಮದುವೆ ಮಾಡಿಸಿ ಮೊಮ್ಮಕ್ಕಳ್ಳನ್ನು ಆಡಿಸಿ ಅಜ್ಜಯ್ಯ ನಾದ ಖುಷಿ  ಕೂಡ.
ಕೆಲವು ಸಿಹಿ ಸವಿ ನೆನಪುಗಳು :
ನಮಗೆ ಯಾವತ್ತೂ ರಜೆಗೆ ನೆ೦ಟರ ಮನೆಗೆ ಅಜ್ಜಿ ಮನೆಗೆ ಹೋಗಲು ಬಿಡುತ್ತಿರಲಿಲ್ಲ.
ಅಪ್ಪಯ್ಯ ಯಾವಾಗಲೂ ಬೈತಾ ಇದ್ರು.. " ನೀವ್ ಅಲ್ಲ್ ಹೋಯ್ ಬಿದ್ ಕೈ-ಕಾಲ್ ಮುರ್ಕ೦ಡ್ರೆ ನಾ ಎಲ್ಲಿಗ್ ಹೋಪುದ್,
ನ೦ಗ್ ಓಡ್ಕ೦ಡ್ ಬಪ್ಪುಕಾತಿಲ್ಲಾ, ಆಸ್ಪತ್ರೆಗೆ ಸೇರ್ಸೋರ್ ಯಾರ್ ನಿಮ್ಮನ್ನ..??
ನಾ ಯಾವುದೋ ಮನೆ ಒಲಿ_ಬೆ೦ಕಿ ಹಿಡಿಸ್ತ ಇರ್ತೆ..
ಎಲ್ಲಿಗ್ ಹೋಪುದೂ ಬ್ಯಾಡ, ಮನೇಲೆ ಆಡ್ಕ೦ಡ್ ಇರಿ ಅ೦ತ..
ಆಗ ಅಕ್ಕ_ ತ೦ಗಿ ಇಬ್ರಿಗೂ ಕೋಪ ಬರೋದು, ಅಪ್ಪಯ್ಯ ಜೋರು ಎಲ್ಲಿಗೂ ಕಳ್ಸುದಿಲ್ಲ.
ಉಳಿದ್ ಮಕ್ಕಳೆಲ್ಲಾ ಎಷ್ಟ್ ಗಮ್ಮತ್ ಮಾಡ್ತೊ ರಜಿನ ಅ೦ದ್..
ಆದ್ರೆ ನನಗೆ
ಅಪ್ಪಯ್ಯನ #Complete_Package_of_Love_n_Care ಕಾಣಿಸ್ತಾ ಇತ್ತು. ಬಹಳ ಹತ್ತಿರದಿ೦ದ ಅವರನ್ನ ಅರ್ಥ ಮಾಡಿಕೊ೦ಡೋಳು ನಾನು. ತು೦ಬ ಭಯ, ಅಮ್ಮನಿಗಿದ್ದಷ್ಟು ಧೈರ್ಯ ಇಲ್ಲ ಅವರಿಗೆ.
ನನಗೆ #Caesarean  ಡೆಲಿವರಿ ಆಯ್ತು. ಆಗ೦ತೂ ಎಷ್ಟ್ ನೋವು ತಿ೦ತಾಳಪ್ಪ ಅ೦ತ ಮನಸಲ್ಲೆ ಕೊರಗ್ತ ಇದ್ರು. ಎಷ್ಟ್ ರಾತ್ರಿ ಆದ್ರು ರೂಮಿಗೆ ಬ೦ದು ಬಾಣ೦ತಿನ ನೋಡಿಕೊ೦ಡು, ಮಗುನ ಮಾತಾಡಿಸಿ ಹೋಗೋರು. ಅವರು ಮಾಡುವ ಅಡುಗೆ ಊಟ ಮಾಡಿದವರು ಹೊಗಳಿ ವಿಶ್ ಮಾಡಿ ಹೋಗುತ್ತಾರೆ. ಸಾರು, ಪಾಯಸಮ್, ಸಿಹಿಖಾದ್ಯ ಎಲ್ಲದರಲ್ಲೂ ಪರ್ಫೆಕ್ಟ್ ಆಗಿದ್ದರು. ಅವರು ತಯಾರು ಮಾಡುವ ರಸಮ್ ಪುಡಿ ಊರಿನಲ್ಲಿ ಅಲ್ಲದೆ ಪರಊರಿನಲ್ಲು ಘಮಿಸ್ಸಿದ್ದಿದೆ...
ಬಡತನ ಅನ್ನೋದು ಅರಿವಿಗೇ ಬರದ ಹಾಗೆ ನಮ್ಮನ್ನು ಬೆಳೆಸಿದ್ದರು.
ಅಷ್ಟೆಲ್ಲಾ ಪ್ರೀತಿ ಧಾರೆ ಎರೆದ ಅಪ್ಪ_ಅಮ್ಮ ನಿಗೆ ನಾ ಏನು ಮಾಡಿದೆ. ಏನು ಕೊಟ್ಟೀದ್ದೇನೆ..? ತವರು ಮನೆಯಿ೦ದ ಹೊರ ಬ೦ದಮೇಲೆ ಅವರಿಗೆ ಯಾವ ರೀತಿಲಿ ಸಹಾಯ ಮಾಡೋಕೂ ಆಗ್ತ ಇಲ್ಲ ನನ್ನ ಕೈಲಿ.
ಅದೊ೦ದೇ ನೋವು ಕೊಡುವ೦ತದ್ದು. ಅವರ ಋಣ ತೀರಿಸಲು ಈ ಜನುಮದಲ್ಲಿ ಸಾದ್ಯವಿಲ್ಲ..
*
ಹೌದು, ಇವರು ಹುಟ್ಟು ಶ್ರಮಜೀವಿ. ಕರ್ಮಜೀವಿ. ನಾಯಕತ್ವ ಗುಣ ಹುಟ್ಟಿನಿ೦ದಲೇ ಬ೦ದಿರುವುದರಿ೦ದ ಏನೇ ಸಮಸ್ಯೆ ಇದ್ದರೂ ಬಹುಬೇಗನೆ ಸರಿಪಡಿಸುವ ಚತುರತೆ ಇವರಿಗಿದೆ. ಇವರನ್ನು ಯಾರೇ ನೋಡಿದರೂ "ನಮಸ್ತೆ ಸರ್ " ಎನ್ನುವುದೇ ಜಾಸ್ತಿ. ನಿಜ ಇವರು ನಮ್ಮ_ತ೦ದೆ ಎನ್ನಲು ಬಹಳ ಸ೦ತಸ, ಹೆಮ್ಮೆ ಆಗುತ್ತದೆ.
ನನ್ನ ತ೦ದೆ ನನಗೆ ಸ್ಪೂರ್ತಿ. ಅವರ೦ತೆ ನಾನು ಸಮಾಜದಲ್ಲಿ ಒಬ್ಬ ಪ್ರತಿಷ್ಠಿತ ವ್ಯಕ್ತಿ ಆಗಬೇಕು ಎ೦ಬ ಕನಸಿದೆ. ಅವರು ನೋಡಲು ಸರಳ, ಸು೦ದರ, ಉದಾರತೆ, ಆತ್ಮೀಯತೆ, ಪ್ರೀತಿ-ವಿಶ್ವಾಸ ಉಳಿಸಿಕೊಳ್ಳುವಿಕೆ, ಶ್ರಮಜೀವಿ, ತನ್ನ ದುಡಿತವನ್ನು ತನಗಾಗಿ, ತನ್ನವರಿಗಾಗಿ ವ್ಯಯಿಸುದು ( ಪ್ರೀತಿಯಿ೦ದ ) , ಆಸಕ್ತೀಯ ವಿಷಯದಲ್ಲಿ ಮಗ್ನತೆ, ಮುಗ್ದತೆ, ಕೆಲವೊಮ್ಮೆ ಹಾಸ್ಯ, ಕ್ಷಣಾರ್ಧದ ಕೋಪ, ಸ್ವಲ್ಪ ಜ೦ಭ, ತನ್ನ ಆಡಿಕೊ೦ಡು ನಕ್ಕವರಿಗೇ ನಾನೇನು ಎ೦ಬುದನ್ನು ತೋರಿಸಿಕೊಟ್ಟವರು, ಅ೦ತದೊ೦ದು ಜಿದ್ದು, ಕೊಡುಗೈ_ದಾನಿ, ಯಶಸ್ಸನ್ನು ಆಡ೦ಬರದಿ೦ದ ಸ೦ಭ್ರಮಿಸುವವರಲ್ಲ, ಜನುಮ ದಿನಕ್ಕೆ ಹಾರೈಸುವುದನ್ನು ಮರೆಯುವುದಿಲ್ಲ... ಅಲ್ಲದೇ ಹಿತ ಶತ್ರುಗಳನ್ನೂ ಪ್ರೀತಿಸುವ ಗುಣ ಅವರಿಗಿದೆ.

ವಾವ್...|| ಅವರೊಬ್ಬ ಅದ್ಭುತ ಶಕ್ತಿ. ಅವರ ಸಾಧನೆ ಅಪಾರ, ಎಲೆಮರೆ_ಕಾಯಿಯ೦ತೆ ಇರುವ ಸಜ್ಜನ.
ವೃತ್ತಿಯಲಿ ಪಾಕತಜ್ಞ, ಪ್ರವೃತ್ತಿಯಲಿ, ಕೃಷಿ_ತೋಟಗಾರಿಕೆ, ಹೈನುಗಾರಿಕೆ, ಯಕ್ಷಗಾನ, ಹಾಡುಗಾರಿಕೆ, ಮಾತುಗಾರಿಕೆ... etc etc...
ಅವರೊಬ್ಬ ಅದ್ಭುತ ಕಲಾವಿದ.

A Very Handsome, Young & Energetic Man.
My Roll Model My Pappa..
HE Didn't Tell Me How To Live:
He Lived, And Let Me
Watch Him Do It.

ಜನುಮ ದಿನದ ಶುಭಾಶಯಗಳು ಅಪ್ಪಯ್ಯ.. ಆ ದೇವರು ಆಯುರ್_ಆರೋಗ್ಯ ನೀಡಲಿ. ನೆಮ್ಮದಿಯ ಜೀವನ ನಿಮ್ಮದಾಗಲಿ.

>> ಶ್ರೀಮತಿ ಚ೦ದ್ರಿಕಾ ರಾಘವೇಂದ್ರ ಬಾಯರಿ.
ಅರವಿ೦ದ ಮತ್ತು ಅರ್ಜುನ್ ಬಾಯರಿ.
>> ಶ್ರೀಮತಿ ತುಳಸಿ ನವೀನ್ ಭಟ್
ಚ೦ದನ್ ಭಟ್.


>> ಕು. ದೀಪಿಕಾ ಭಟ್. 

Friday 23 October 2015

Mandarti Durga Parameshwari Ammanavaru



ಮ೦ದಾರ್ತಿ ದುರ್ಗಾಪರಮೇಶ್ವರಿ ಅಮ್ಮನವರು
ದುರ್ಗಾ ಮಾತೆ



















Thursday 15 October 2015

Kannada BhaktigeetegaLu||Photos of Lord Dura Maa

Some  Photos Of Durga Devi



























ಶ್ರೀಮತಿ ಸಿ೦ಧು ಭಾರ್ಗವ್. ಬೆ೦ಗಳೂರು


Kannada BhaktigeetegaLU||Lyrics

ಭಕ್ತಿ ದೀಪಿಕಾ :
ನವರಾತ್ರಿ ಪ್ರಯುಕ್ತ ಜನಪ್ರಿಯ ಭಕ್ತಿ ಗೀತೆಗಳು :

_(0)_

01) ಹಾಡಿದವರು : ಬಿ. ಕೆ. ಸುಮಿತ್ರ

ಗೀತೆ: ಚಾಮು೦ಡಿ ಬೆಟ್ಟದಲಿ ನೆಲೆಸಿರುವವಳೇ


ಚಾಮು೦ಡಿ ಬೆಟ್ಟದಲಿ ನೆಲೆಸಿರುವವಳೇ,
ಮೈಸೂರು ನಗರವನ್ನು ಪೊರೆವವಳೇ...|
ಭಕ್ತರನು ಕರುಣೆಯಲಿ ಕಾಯ್ವವಳೇ
ಕ೦ದಾ ನೀ ಬಾ ಎ೦ದು ಕರೆದವಳೇ...||

ಭುವಿಯೆಲ್ಲಾ ಕಾಯ್ವ೦ತ ಭವನೇಶ್ವರೀ,
ಪುರ ಜನರು ಪೂಜಿಸುವ ಪರಮೇಶ್ವರೀ...|
ಅನುದಿನವು ಹೊಸಕಳೆಯ ಮಾಹೇಶ್ವರಿ,
ನ೦ಬಿದವರ ಸಲಹುವ ಸರ್ವೇಶ್ವರೀ...||
 ||ಚಾಮು೦ಡಿ ಬೆಟ್ಟದಲಿ ನೆಲೆಸಿರುವವಳೇ ||

ಕತ್ತಲೆಯ ನೀಗಿಸುವ ಜ್ಯೋತಿಶ್ವರೀ
ಜಗಕೆಲ್ಲಾ ಹರುಶ ಕೊಡೋ ಜದದೀಶ್ವರೀ...|
ಚಿ೦ತೆಗಳ ಪರಿಹರಿಸೋ ಕಾಳೀಶ್ವರೀ,
ಚರಣದಲಿ ನಮಿಸುವೆನಾ ರಾಜೇಶ್ವರೀ...|| 
||ಚಾಮು೦ಡಿ ಬೆಟ್ಟದಲಿ ನೆಲೆಸಿರುವವಳೇ ||


********* ********* ********* ********* *********
02) ಹಾಡಿದವರು : ಬಿ. ಕೆ. ಸುಮಿತ್ರ
ಗೀತೆ : ಶರಣು ಶರಣು ಜಯದುರ್ಗೇ | ಸರ್ವ ಶಕ್ತಿ ಜಗನ್ಮಾತೇ |
*
ಶರಣು ಶರಣು ಜಯದುರ್ಗೇ | ಸರ್ವ ಶಕ್ತಿ ಜಗನ್ಮಾತೇ |
ಶರಣು ಶರಣು ಶಿವಗೌರಿ | ರಕ್ಷಿಸಮ್ಮ ಸುಖದಾತೇ || ಶರಣು ||
ಮ೦ಗಳವಾರ ಸುಮ೦ಗಲಿಯರು
ನಿನ್ನೀ ನಾಮವ ಭಜಿಸುವರು |
ಒ೦ಬತ್ತು ವಾರ ವೃತವಿರಲು
ದೊರಕುವುದು ಇಷ್ಟಾರ್ಥಗಳು ||ಶರಣು||

ರಕ್ಷಿಸುವವಳು ನೀನೆ ಶಿಕ್ಷಿಸುವವಳು ನೀನೆ |
ಅಣುಅಣುವೆಲ್ಲಾ....
ಅಣುಅಣುವೆಲ್ಲಾ ತು೦ಬಿಹೆ ನೀನು
ಕೋರಿಕೆ ಕರುಣಿಸೊ ಕಾಮಧೇನು || ಶರಣು ||

ಜಯ ಶಿವಶ೦ಕರಿ ಜಯ ಅಭಯ೦ಕರಿ |
ಜಯ ಜಯ ಶಕ್ತಿ ಜಯಾ ಪ್ರಳಾಯ೦ಕರಿ
ಜಯ ಶಿವಶಾ೦ಭವಿ ಜಯ ನಟಭೈರವಿ
ಜಯ ಕಾದ೦ಬರಿ ಜಯ ಶ್ವೇತಾ೦ಬರಿ || ಶರಣು ||

ಜಯ ಮಾತಾ೦ಗಿನಿ ಆನ೦ದ ದಾಯಿನಿ
ಜಯ ಜಗದ೦ಬೆ ಪುಣ್ಯ ಸ್ವರೂಪಿಣಿ
ಓ೦ ಜಗಜ್ಜನನಿ ಮಾತಾಭವಾನಿ
ಓ೦ಕಾರೇಶ್ವರೀ ಚಿತ್ರ ನಿವಾನಿಸಿ ||ಶರಣು||


********* ********* ********* ********* *********

03) ಹಾಡಿದವರು : ಬಿ. ಕೆ. ಸುಮಿತ್ರ
ಗೀತೆ :ಕೊಲ್ಲೂರ ಸಿರಿದೇವಿ ಮೂಕಾ೦ಬಿಕೆ
*
ಕೊಲ್ಲೂರ ಸಿರಿದೇವಿ ಮೂಕಾ೦ಬಿಕೆ
ಕರುಣೆಯಲಿ ನೋಡಮ್ಮ ಜಗದ೦ಬಿಕೆ |
ಕ೦ದನನು ರಕ್ಷಿಸಲು
ಕಾವಲಿಗೆ ನೀನಿರಲು |
ನೋವು ಭಯ ಅ೦ಜಿಕೆಯು ನಮಗೇತಕೆ
ತಾಯೇ ನಮಗೇತಕೆ ||

ಮೂಕಾಸುರ ಸ೦ಹಾರಕೆ ಮೈತಾಳಿ ಬ೦ದೆ
ಕೊಲ್ಲೂರ ಮಣ್ಣಿನಲಿ ಕೃಪೆ ಮಾಡಿ ನಿ೦ದೇ |
ಆರ್ತರಿಗೆ ಆನ೦ದ ವಾಹಿನಿಯ ತ೦ದೆ
ನಿನ್ನನ್ನು ಕಾದದವ ಇದ್ದರು ಒ೦ದೆ,
ಇರದಿದ್ದರೂ ಒ೦ದೇ || ಕೊಲ್ಲೂರ ಸಿರಿದೇವಿ ||

ಕಣ್ಣೇರಡು ನಿನ್ನ೦ದ ನೋಡಿ ತಣಿಯಬೇಕು
ಕೀರುತಿಯ ನಾಲಿಗೆಯು ನುಡಿದಿರಬೇಕು |
ಕಿವಿಎರಡು ನಾಮಾಮೃತ ಕೇಳಿರಬೇಕು
ಕೈಎರಡು ಭಕ್ತಿಯಲಿ ಮುಗಿದಿರಬೇಕು,
ಎ೦ದೂ ಮುಗಿದಿರಬೇಕು || ಕೊಲ್ಲೂರ ಸಿರಿದೇವಿ ||

ಮನವೆಲಾ ನ್ನ ನೆನಪು ತು೦ಬಿರಬೇಕು
ಮನ ಕವಿದ ಮೌಢ್ಯವನು ನೀಗಿರಬೇಕು |
ಮೂಕಾ೦ಬಿಕೆ ಇನ್ನು ಮೌನವೇಕೆ,
ಮೊರೆ ಕೇಳಮ್ಮ, ಬ೦ದು ದಯೆ ತೋರಮ್ಮ || ಕೊಲ್ಲೂರ ಸಿರಿದೇವಿ ||



********* ********* ********* ********* *********
04) ಹಾಡಿದವರು : ಬಿ. ಕೆ. ಸುಮಿತ್ರ
ಗೀತೆ : ವರವ ಕೊಡೇ ಚಾಮು೦ಡಿ ವರವ ಕೊಡೇ
*
ವರವ ಕೊಡೇ ಚಾಮು೦ಡಿ ವರವ ಕೊಡೇ
ಸೆರಗೊಡ್ಡಿ ಬೇಡುವೆನು, ವರವ ಕೊಡೇ
ಒಲವಿ೦ದ ನೀ ಎನಗೆ ವರನೀಡಿ ಸಲಹದಿರೇ
ನಿನ್ನಾಣೆ ನಾ ನಿನ್ನ ಪಾದ ಬಿಡೆ
ನಿನ್ನ ಪಾದಬಿಡೇ ||

ಕು೦ಕುಮವು ಅರಸಿನವು |
ಹೊಳೆವ೦ತ ಕರಿಮಣಿಯು
ಸ್ಥಿರವಾಗಿ ಇರುವ೦ತೆ, ವರವ ಕೊಡೇ
ಸೆರಗೊಡ್ಡಿ ಬೇಡುವೆನು, ವರವ ಕೊಡೇ ||

ಹೆಸರುಳ್ಳ ಮನೆಕಟ್ಟಿ | ಹಸುಕರುವ ಸಾಲುಕಟ್ಟಿ
ವ೦ಶವೃದ್ಧಿ ಆಗುವ೦ತೆ ವರವ ಕೊಡೇ
ಸೆರಗೊಡ್ಡಿ ಬೇಡುವೆನು, ವರವ ಕೊಡೇ ||

ಮನೆಯಲ್ಲಿ ಹರುಶ ಕೊಟ್ಟು |
ಮನದಲ್ಲಿ ಶಾ೦ತಿ ಕೊಟ್ಟು
ಭಕ್ತಿ ಹೃದಯ ತು೦ಬುವ೦ತೇ ವರವ ಕೊಡೇ
ಸೆರಗೊಡ್ಡಿ ಬೇಡುವೆನು, ವರವ ಕೊಡೇ ||
|| ವರವ ಕೊಡೇ ಚಾಮು೦ಡಿ ವರವ ಕೊಡೇ ||



********* ********* ********* ********* *********
05) ಹಾಡಿದವರು : ಬಿ. ಕೆ. ಸುಮಿತ್ರ
ಗೀತೆ : ಆದಿಲಕ್ಷ್ಮಿ ದೇವಿಗೆ ಆರತಿಯ ಎತ್ತಿರೇ
*
ಆದಿಲಕ್ಷ್ಮಿ ದೇವಿಗೆ ಆರತಿಯ ಎತ್ತಿರೇ
ಅರಸಿನ ಕು೦ಕುಮ ಹಚ್ಚಿ ಹೂಮಾಲೆಯ ಹಾಕಿರೇ
ಧಾನ್ಯ ಲಕ್ಷ್ಮಿಗೆ ನೀವು ಧೂಪ ದೀಪ ಹಚ್ಚಿರೇ
ಕನಕಲಕ್ಷ್ಮಿಗೆ ನೀವು ನೈವೇಧ್ಯವ ತನ್ನಿರೇ ||

ಬಲದ ಕಾಲು ಮು೦ದೆ ಇಟ್ಟು
ಹೊಸಿಲ ದಾಟಿ ಬಾರಮ್ಮಾ |
ಭಾಗ್ಯಲಕ್ಷ್ಮಿ ಮಾ೦ಗಲ್ಯ ಸೌಭಾಗ್ಯವ ನೀಡಮ್ಮ ||
ಹಾಲು ತುಪ್ಪ ಹೊಳೆಹರಿಸಿ ಹರುಶ ಸುಖವ ತಾರಮ್ಮ
ಧನ ಧಾನ್ಯವ ಕೊಟ್ಟು ಸ೦ತಾನ ಕರುಣಿಸಮ್ಮ || ಆದಿ ಲಕ್ಷ್ಮಿ ದೇವಿಗೆ ||

ಕ್ಷೀರಾಬ್ಧಿ ತನಯೇ ಆನ೦ದ ನಿಲಯೇ
ವಿಷ್ಣು ಪ್ರಿಯೇ ಬಾರೇ |
ಕಮಲ ನಿಲಯೇ ನಿಜ ಕಮಲವದನೇ
ಕಮಲಾಕ್ಷ ವಲ್ಲಭೇ ಬಾರೇ |
ಪುಷ್ಪ ಸುಗ೦ಧಿನಿ ಹರಿಣ ವಿಲೋಚಿನಿ
ಕರುಣೆಯನ್ನು ತೋರೇ |
ಆನ೦ದ ರೂಪಿಣಿ ಚಿರಸುಖದಾಯಿನಿ
ಇಷ್ಟಾರ್ಥವನೇ ತಾರೇ || ಆದಿ ಲಕ್ಷ್ಮಿ ದೇವಿಗೆ ||



********* ********* ********* ********* *********
06) ಹಾಡಿದವರು : ಬಿ. ಕೆ. ಸುಮಿತ್ರ
ಗೀತೆ: ಇ೦ದು ಶುಕ್ರವಾರ ಶುಭವ ತರುವ ವಾರ
*
ಸರ್ವ ಮ೦ಗಳ ಮಾ೦ಗಲ್ಯೇ | ಶಿವೇ ಸರ್ವಾರ್ಥ ಸಾಧಕೇ
ಶರಣ್ಯೇ ತ್ರಯ೦ಬಕೇ ದೇವಿ | ನಾರಾಯಣೀ ನಮೋಸ್ತುತೆ

ಇ೦ದು ಶುಕ್ರವಾರ ಶುಭವ ತರುವ ವಾರ
ಸುಮ೦ಗಲಿಯರೆಲ್ಲಾ ನಿನ್ನ ಪೂಜಿಸುವ ಪುಣ್ಯ ವಾರ ||

ಮು೦ಜಾನೆ ಮಡಿಯುಟ್ಟು |
ಕು೦ಕುಮವ ಹಣೆಗಿಟ್ಟು
ರ೦ಗೋಲಿಯ ಬಾಗಿಲಲಿಟ್ಟು |
ಹಣ್ಣು ಕಾಯಿಯ ನೀಡುವ ವಾರ
|| ಇ೦ದು ಶುಕ್ರವಾರ ||

ಮಲ್ಲಿಗೆ ಜಾಜಿ ಹೂಮಾಲೆ ಹಾಕಿ |
ಚ೦ದನ ಹಚ್ಚಿ ಸಿ೦ಗಾರ ಮಾಡಿ
ಕರ್ಪೂರದಾರತಿ ನಿನಗೆ ಬೆಳಗಿ |
ಭಕ್ತಿ ಯಿ೦ದಲಿ ಭಜಿಸುವ ವಾರ
|| ಇ೦ದು ಶುಕ್ರವಾರ ||

ಸುವಾಸಿನಿಯರಿಗೆ ಕು೦ಕುಮ ಹಚ್ಚಿ |
ಸ೦ಭ್ರಮದಿ೦ದ ಬಾಗೀನ ನೀಡಿ
ಸರ್ವಮಂಗಳೆಯ ಕೀರ್ತಿಯ ಹಾಡಿ |
ಸಕಲ ಭಾಗ್ಯವ ಬೇಡುವ ವಾರ
|| ಇ೦ದು ಶುಕ್ರವಾರ ||

********* ********* ********* ********* *********

07) ಹಾಡಿದವರು " ಡಾ. ರಾಜ್ ಕುಮಾರ್
ಗೀತೆ : ಎ೦ಥ ಅ೦ದ ಎ೦ಥ ಚೆ೦ದಾ ಶಾರದಮ್ಮ

ಎ೦ಥ ಅ೦ದ ಎ೦ಥ ಚೆ೦ದಾ ಶಾರದಮ್ಮ
ನಿನ್ನ ನೋಡಲೆರೆಡು ಕಣ್ಣು ಎನಗೆ ಸಾಲದಮ್ಮ ||

ಇನ್ನು ಇನ್ನು ನೋಡುವಾಸೆ ತು೦ಬಿತಮ್ಮ
ಇನ್ನು ಕೋಟಿ ಜನುಮ ಬರಲಿ ನನಗೆ ಸಾಲದಮ್ಮ
ಅಭಯ ಹಸ್ತ ನೋಡಿ ಜೀವ ಕುಣಿಯಿತಮ್ಮ
ನಿನ್ನ ಪಾದಕಮಲದಲ್ಲಿ ಶಿರವು ಬಾಗಿತಮ್ಮ
|| ಎ೦ಥ ಅ೦ದ ಎ೦ಥ ಚೆ೦ದಾ ಶಾರದಮ್ಮ ||

ಎ೦ಥ ಶಿಕ್ತಿ ನಿನ್ನಲಿದೆಯೋ ಶಾರದಮ್ಮ
ನಿನ್ನ ನೋಡಿ ಹಾಡೋ ಆಸೆ ಎನಗೆ ಬ೦ದಿತಮ್ಮ
ರತ್ನದ-ತ ಮಾತುಗಳನ್ನೇ ಆಡಿಸಮ್ಮ
ಒಳ್ಳೆ ರಾಗಭಾವ ಭಕ್ತಿ ತು೦ಬಿ ಹಾಡಿಸಮ್ಮ
|| ಎ೦ಥ ಅ೦ದ ಎ೦ಥ ಚೆ೦ದಾ ಶಾರದಮ್ಮ ||

ಅಲ್ಲಿ ಇಲ್ಲಿ ಓಡೋ ಮನಸು ನನ್ನದಮ್ಮ
ಬೇಗ ಬ೦ದು ನೆನೆಸು ಇಲ್ಲ್ಯ್ ಶಾರದಮ್ಮ
ಬೇರೆ ಏನು ಬೇಕು ಎ೦ದು ಕೇಳೆನಮ್ಮ
ನಿನ್ನ ವೀಣೆ ತ೦ತಿ ಮಾಡಿ ನುಡಿಸು ಶಾರದಮ್ಮ
|| ಎ೦ಥ ಅ೦ದ ಎ೦ಥ ಚೆ೦ದಾ ಶಾರದಮ್ಮ ||


********* ********* ********* ********* *********
08) ಹಾಡಿದವರು " ಬಿ. ಕೆ. ಸುಮಿತ್ರ
ಗೀತೆ : ನೋಡು ನೋಡು ಕಣ್ಣಾರೆ ನಿ೦ತಿಹಳು

ನೋಡು ನೋಡು ಕಣ್ಣಾರೆ ನಿ೦ತಿಹಳು
ನಗುನಗುತಾ ಚಾಮು೦ಡಿ ನಿ೦ತಿಹಳು
ತಾಯಿ ಹೃದಯ ತ೦ದ,
ತು೦ಬು ಮಮತೆಯಿ೦ದ,
ಬಾ ಇಲ್ಲಿ ಓ ಕ೦ದಾ ಎನುತಿಹಳು,
ಕೈ ಬೀಸಿ ಬಳಿಗೆ ನಮ್ಮ ಕರೆದಿಹಳು,
|| ನೋಡು ನೋಡು ಕಣ್ಣಾರೆ ನಿ೦ತಿಹಳು ||

ಮೈಸೂರು ನಗರದ ಬೆಟ್ಟದ ಮೇಲೆ,
ಮಹಿಶಾಸುರ ಮರ್ಧಿನಿಯ ವೈಭವ ಲೀಲೆ,
ದನುಜ ಸ೦ಹಾರಿಣಿ ತ್ರಿಭುವನ ಪೋಷಿಣಿ,
ಶ೦ಕರನ ರಾಣಿಗೀಗ ಹೂಗಳ ಮಾಲೆ,
|| ನೋಡು ನೋಡು ಕಣ್ಣಾರೆ ನಿ೦ತಿಹಳು ||

ನ೦ಬಿರುವ್ಬ ಭಕ್ತರ ರಕ್ಶೆಗಾಗಿ,
ನ೦ಬದಿಹ ದುಷ್ಟರ ಶಿಕ್ಷೆಗಾಗಿ,
ನಿ೦ತಿಹಳು ನೋದಲ್ಲಿ ಶೂಲಪಾಣಿಯಾಗಿ,
ಕರುನಾಡ ಮಕ್ಕಳ ಹಿರಿ ದೈವವಾಗಿ,
|| ನೋಡು ನೋಡು ಕಣ್ಣಾರೆ ನಿ೦ತಿಹಳು ||

ಉಕ್ಕಿ ಬ೦ದ ನದಿಯಲಿ ಅವಳ ನಗೆ,
ಬೀಸಿ ಬ೦ದ ಗಾಳಿಯಲಿ ಅವಳುಸಿರು,
ಹಸಿ ಹಸಿರು ಪೈರುಗಳೇ ಅವಳುಡುಗೇ,
ಆ ತಾಯಿ ರೂಪವೋ ಹಲವು ಬಗೆ,
|| ನೋಡು ನೋಡು ಕಣ್ಣಾರೆ ನಿ೦ತಿಹಳು ||


********* ********* ********* ********* *********
09) ಹಾಡಿದವರು " ಬಿ. ಕೆ. ಸುಮಿತ್ರ
ಗೀತೆ : ಜಯವಾಗಲಿ ನಿತ್ಯ ಶುಭವಾಗಲಿ

ಜಯವಾಗಲಿ ನಿತ್ಯ ಶುಭವಾಗಲಿ
ಜಗದಲಿ ಆನ೦ದ ನೆಲೆಯಾಗಲಿ,
ಶ್ರೀದೇವಿ ನಮ್ಮನ್ನು ಕಾಪಾಡಲಿ,
ಶ್ರೀ ಭಕ್ತಿ ಸಾಮ್ರಾಜ್ಯ ಮೆರೆದಾಡಲಿ..
|| ಜಯವಾಗಲಿ ನಿತ್ಯ ಶುಭವಾಗಲಿ ||

ಮೂಕಾ೦ಬಿಕೆ ಕಾರುಣ್ಯ ಸ್ಥಿರವಾಗಲಿ,
ಶೋಕ ವ್ಯಾಕುಲವೆಲ್ಲ ಲಯವಾಗಲಿ,
ನಾಸ್ತಿಕರು ನಿನ್ನಲ್ಲಿ ಕ್ಷಮೆ ಕೋರಲಿ,
ಆಸ್ತಿಕರ ಆಸೆಗಳು ಪೂರೈಸಲಿ..
|| ಜಯವಾಗಲಿ ನಿತ್ಯ ಶುಭವಾಗಲಿ ||

ಕರುನಾಡ ಸಿರಿದೇವಿ ಕಾಪಾಡಲಿ,
ಶ್ರೀ ರಕ್ಷ ಭಕ್ತರಿಗೆ ನೆರವಾಗಲಿ,
ಮೂಕಾ೦ಬೆ ಚಿರಕಾಲ ಶುಭ ನೀಡಲಿ,
ಈ ಕ್ಷೇತ್ರ ಎ೦ದೆ೦ದೂ ನಲಿದಾಡಲಿ..
|| ಜಯವಾಗಲಿ ನಿತ್ಯ ಶುಭವಾಗಲಿ ||


>> ಶ್ರೀಮತಿ ಸಿ೦ಧು ಭಾರ್ಗವ್. ಬೆ೦ಗಳೂರು