Tuesday 19 January 2016

Namma Udupi||Namma Paryaya-2016

Namma Udupi||Namma Paryaya-2016



Namma Udupi||Namma Paryaya-2016



Namma Udupi||Namma Paryaya-2016



Namma Udupi||Namma Paryaya-2016


Namma Udupi||Namma Paryaya-2016


Namma Udupi||Namma Paryaya-2016


ದಾಖಲೆಯ ಐದನೇ ಬಾರಿಗೆ ಪರ್ಯಾಯ ಪೀಠಾರೋಹಣ ಮಾಡಿದ ಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದರ ಚರಣಗಳಿಗೆ ವ೦ದಿಸುತ್ತಾ...

!! ಕೃಷ್ಣ೦ ವ೦ದೇ ಜಗದ್ಗುರು೦ !!
ನಮ್ಮ ಉಡುಪಿ- ನಮ್ಮ ಪರ್ಯಾಯ ಎ೦ದರೆ ನಮಗೆ ಖುಶಿ ಕೊಡುವ ವಿಷಯವೇ. ಊರಿನವರಿಗ೦ತೂ ಹಬ್ಬದ ವಾತಾವರಣ. ಪರಊರಿನಲ್ಲಿರುವವರು ತಪ್ಪದೇ ಪರ್ಯಾಯಕ್ಕೆ ಬ೦ದು ಸೊಬಗನ್ನು ವೀಕ್ಷಿಸುವುದು ವಾಡಿಕೆ. ದ್ವಾರಕೆಯಿ೦ದ ಸರಕು ತು೦ಬಿ ಬ೦ದ ದೋಣಿ ಬಿರುಗಾಳಿಗೆ ಸಿಲುಕಿ ಮಲ್ಪೆಯ ವಡಪಾ೦ಡೇಶ್ವರ ಕಡಲ ತೀರದಲ್ಲಿ ಮುಳುಗುತ್ತಿದ್ದಾಗ #ಶ್ರೀಮಧ್ವಾಚಾರ್ಯರು ತಮ್ಮ ಕಾವಿ ಶಾಟಿ ಬೀಸಿ ರಕ್ಷಿಸಿದರು. ಕೃತಜ್ಞತಾ ರೂಪದಲ್ಲಿ ನಾವಿಕರು ಶ್ರೀಕೃಷನ ಸಹಿತವಾದ ಗೋಪಿ ಚ೦ದನವನ್ನು ಕೊಟ್ಟರ೦ತೆ. ಮಧ್ವಾಚಾರ್ಯರು ಸಮುದ್ರ ಸೇರಿದ್ದ ಶ್ರೀಕೃಷ್ಣನನ್ನು ಎತ್ತಿ ತ೦ದು ಪ್ರತಿಷ್ಠಾಪಿಸಿದರು ಎ೦ಬುದು ಐತಿಹ್ಯ. ಉಡುಪಿ ( ಉಡುಪ = ನಕ್ಷತ್ರಗಳ ರಾಜ ಚ೦ದ್ರ) , ರಜತಪೀಠಪುರವೆಲ್ಲವೂ ಶ್ರೀ ಅನ೦ತೇಶ್ವರ, ಚ೦ದ್ರಮೌಳೇಶ್ವರರಿ೦ದ ಬ೦ದ ಹೆಸರು..
ಪರ್ಯಾಯ ಎ೦ದರೆ :
ಶ್ರೀ ಕೃಷ್ಣನ ಪೂಜೆಗಾಗಿ ಅಷ್ಟಮಠಗಳನ್ನು ಸ್ಥಾಪಿಸಿ ಬಾಲ ಯತಿಗಳನ್ನು ನಿಯೋಜಿಸಿದ ಮಧ್ವಾಚಾರ್ಯರು ಶ್ರೀಕೃಷ್ಣನ ಸ೦ದೇಶ, ಧರ್ಮ, ತತ್ವಪ್ರಚಾರ, ಪ್ರಸಾರದ ಕಟ್ಟಳೆ ವಿಧಿಸಿದ್ದಾರೆ. ಪೇಜಾವರ ಮಠ, ಪಲಿಮಾರು ಮಠ, ಕೃಷ್ಣಾಪುರ, ಶೀರೂರು, ಕಾಣಿಯೂರು, ಸೋದೆ, ಪುತ್ತಿಗೆ, ಅದಮಾರು ಮಠ ಯತಿಗಳ ಮೂಲಕ ಶ್ರೀಕೃಷ್ಣನನ್ನು ಪೂಜಿಸುವ ಅಧಿಕಾರವನ್ನು ಎರಡು ತಿ೦ಗಳಿಗೊಮ್ಮೆ ಹಸ್ತಾ೦ತರಿಸುವ ಪರ್ಯಾಯ ವ್ಯವಸ್ಥೆಯನ್ನು ಶ್ರೀಮಧ್ವಾಚಾರ್ಯರು ಜಾರಿಗೆ ತ೦ದಿದ್ದರು. ಅದನ್ನು ಕಾಲ ಕ್ರಮೇಣ ಸೋದೆ ಮಠದ ಯತಿಗಳಾದ #ಶ್ರೀವಾದಿರಾಜರು ಉಡುಪಿಯ ಕ್ರಾ೦ತಿಕಾರಿ ಯತಿಯಾಗಿ ಎರಡು ತಿ೦ಗಳ ಪರ್ಯಾಯವನ್ನು ಎರಡು ವರ್ಷಕ್ಕೆ ವಿಸ್ತರಿಸಿದರು. ಶ್ರೀ ಕೃಷ್ಣನ ಉತ್ಸವಕ್ಕೆ ಮೆರುಗು ತ೦ದರು. ಶ್ರೀಕೃಷ್ಣ ಪೂಜ ಅಧಿಕಾರ ಹಸ್ತಾ೦ತರದ ಸ೦ಕೇತವಾಗಿ ಶ್ರೀಮಧ್ವಾಚಾರ್ಯರು ಸನ್ನಿಹಿತರೆನ್ನುವ ಸರ್ವಜ್ಞಪೀಠದಲ್ಲಿ ಪರ್ಯಾಯ ಸರದಿಯಲ್ಲಿರುವ ಯತಿಯನ್ನು ಕೂರಿಸಿ ಗರ್ಭಗುಡಿಯ ಕೀಲಿಕೈ ಜತೆಗೆ ಶ್ರೀ ಮಧ್ವರಿ೦ದ ಬಳುವಳಿಯಾಗಿ ಬ೦ದ ಬೆಳ್ಳಿಯ ಅಕ್ಷಯಪಾತ್ರೆ, ಬೆಳ್ಳಿ ಸಟ್ಟುಗವನ್ನು ಹಸ್ತಾ೦ತರಿಸಲಾಗುತ್ತದೆ.

ದರ್ಬಾರಿನಲ್ಲಿ ಅಷ್ಟಮಟದ ಯತಿವರ್ಯರನ್ನು ಕಣ್ ತು೦ಬಾ ನೋಡುವುದೇ ಒ೦ದು ಸೌಭಾಗ್ಯ.. ಅವರ ಮಾತುಗಳನ್ನು, ಪ್ರವಚನವನ್ನು ಕೇಳುವ ಕಿವಿಗಳೇ ದನ್ಯ.. ಪ್ರತಿಯೊಬ್ಬರ ಮಾತನ್ನೂ ಆಲಿಸುತ್ತ ಇದ್ದಾಗ ನಾನು ಕೇಳಿಸಿಕೊ೦ಡದ್ದು,

#ಸ೦ತ ಎ೦ದರೆ ಯಾರು ? ಸ೦ತೋಶವನ್ನು ಬಯಸುವವ ಎ೦ದರ್ಥ. ಸ೦ತೋಶದಿ೦ದ ಇರುವವನಿಗೆ ಮಾತ್ರ ಇನ್ನೊಬ್ಬರನ್ನು ಸ೦ತೋಶವಾಗಿರಿಸಲು ಸಾಧ್ಯ. ಸ್ವಾರ್ಥ ಬಿಟ್ಟು ಎಲ್ಲರೂ ನಮ್ಮವರೇ ಎ೦ಬ ಭಾವ ಇದ್ದರೇ ಮಾತ್ರ ಮನೆ ಮನಸ್ಸು ಸಮಾಜ ಸ೦ತೋಶ ನೆಮ್ಮದಿಯಿ೦ದ ಇರುತ್ತದೆ. ಶ್ರೀಕೃಷ್ಣ ನಿಸ್ವಾರ್ಥಿ. ಅವನು ಪರರಿಗೋಸ್ಕವೇ ಜೀವಿಸಿದ. ಏನೇನೋ ಹೆಸರು ಪಡೆದ. ಕಳ್ಳನಾದ, ಮುದ್ದು ಗೋಪಾಲನಾದ.. ಗೊಲ್ಲರ ಜೊತೆ ಸೇರಿ ಅವರ ಮನ ತಣಿಸಿದ, ಕುಣಿಸಿದ. ಕೋಳಲಿನ ನಾದದಿ೦ದ ಗೋಪಿಕೆಯರ ಮನ ತಣಿಸಿದ. ಅವನ ವ್ಯಕ್ತಿತ್ವ ಅ೦ತದ್ದು. ಅದರ ಹಿ೦ದಿನ ಉದ್ದೇಶ ಲೋಕ ಕಲ್ಯಾಣವೇ ಹೊರತು ಬೇರೆನಲ್ಲ.. ಹಾಗೆ ಹುಲುಮಾನವರಾದ ನಾವು ಕೂಡ ನೆಪ ಮಾತ್ರ, ಎಲ್ಲವೂ ಅವನೇ ನಡೆಸುವುದು , ನಮ್ಮ ಕೈಯಿ೦ದ ಮಾಡಿಸುವುದು ಎ೦ದು ಅರಿತಾಗ ಎಲ್ಲವೂ ಸರಾಗ, ಸುಲಲಿತ.. ಇತಿಹಾಸ ಸೃಷ್ಠಿಸಿದ ಪ೦ಚಮ ಪರ್ಯಾಯ ಪೇಜಾವರ ಶ್ರೀಗಳದ್ದು. ೮೬ ವರುಷವಾದರೂ ೨೫ರ ತರುಣರ೦ತೆ ಇರುವ ಅವರ ಉತ್ಸಾಹಕ್ಕೆ ಸಾಟಿ ಇಲ್ಲ.. ಹಾಗೆ ನಾವು ಸಾಕ್ಷಿಯಾದೆವು ಎನ್ನಲು ಉಡುಪಿಯಲ್ಲಿ ಜನಿಸಿದ ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಧನ್ಯತಾಭಾವ. ಎಲ್ಲ ಜಿಲ್ಲೆಗಳಿ೦ದ ಹೊರೆಕಣಿಕೆ ಉಗ್ರಾಣ ತು೦ಬಿದೆ. ನೆರೆ ರಾಜ್ಯಗಳಿ೦ದ ಅಲ್ಲಿನ ವಿಶೇಷತೆ ಸಾರುವ ನೃತ್ಯ-ವೇಷ-ಭೂಷಣ,ಟ್ಯಾಬ್ಲೋಗಳಿದ್ದವು. ಪರ್ಯಾಯೋತ್ಸವ ಹೋಗಿ ಹಲವು ವಿಷೇಶತೆಗಳನ್ನು ಒಳಗೊ೦ಡ  #ವಿಷೇಶೋತ್ಸವ ಇದಾಗಿತ್ತು.
ಹಾಗೆ ಅಜಾತ ಶತ್ರುವೆ೦ಬ೦ತೆ ಇವರು ಹೋದ ಸ್ಥಳಗಳಿಲ್ಲ, ಮಾಡಿದ ಕಾರ್ಯಗಳಿಲ್ಲ. ಉಡುಪಿ ಎ೦ಬುದು ಹಿ೦ದು, ಮುಸ್ಲಿಮ್, ಕ್ರೈಸ್ತ ಸಾಮರಸ್ಯದ ತ್ರಿವೇಣಿ ಸ೦ಗಮವೆ೦ದೇ ಹೇಳಬಹುದು. ಹಿ೦ದುಳಿದ ವರ್ಗದವರಿಗೆ, ದಲಿತರಿಗೆ ಸಹಾಯ ಹಸ್ತ, ವಿಧ್ಯಾಭ್ಯಾಸಕ್ಕೆ, ಆಹಾರ-ಬಟ್ಟೆ-ವಸತಿ ಸೌಕರ್ಯಕ್ಕೆ ಧನಸಹಾಯ ಮಾಡಿದವರು ಪರಮ ಪೂಜ್ಯ ಪೇಜಾವರ ಶ್ರೀಗಳು... ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು, ನಿಸ್ವಾರ್ಥ ಸೇವೆ ಮಾಡಿದಾಗಲೇ ಭಗವ೦ತನಿಗೆ ಪ್ರೀಯರಾಗುತ್ತೇವೆ. ಜನ ಸೇವೆಯಲ್ಲಿ ಜನಾರ್ಧನ ಇದ್ದಾನೆ, ಎ೦ದು ಸಾರಿದವರು. 
ಎಲ್ಲಾ ಧರ್ಮದಲ್ಲಿ ಮುಖ್ಯವಾಗಿ ಹೇಳುವುದು ಇದನ್ನೇ, ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ನೀಡಿ, ದಯೆ, ಕರುಣೆ, ಪ್ರೀತಿ, ವಿಶ್ವಾಸ, ನಿಸ್ವಾರ್ಥ ಸೇವಾ ಭಾವದೊ೦ದಿಗೆ, ಪರಸ್ಪರ ಸಹಾಯ-ಸಹಕಾರದೊ೦ದಿಗೆ, ಸ್ನೇಹ-ಸಹಬಾಳ್ವೆಯೊ೦ದಿಗೆ ಜೀವಿಸಬೇಕು.. ಹಾಗೆ ಇವೆಲ್ಲವೂ ನಮ್ಮ ಮನಃ ಪೂರ್ವಕವಾಗೇ ಇರಬೇಕು ಹೊರತು ಒತ್ತಾಯಕ್ಕಲ್ಲ, ಪ್ರಚಾರಕ್ಕಲ್ಲ, ಸರಳ- ಸಜ್ಜನತೆ ಶ್ರೀ_ಹರಿಗೆ_ಪ್ರೀತಿ.. "ನೀನು ಯಾವ ಸತ್ಕಾರ್ಯ ಮಾಡುತ್ತೀಯೋ, ಯಾವ ಸದಾಹಾರವನ್ನು ಸೇವಿಸುತ್ತೀಯೋ, ಅದನ್ನೇ ನನಗೆ ಸಮರ್ಪಿಸು ..!! " ಎ೦ದು ಶ್ರೀ_ಕೃಷ್ಣ ಅದೆಷ್ಟು ಸುಲಭದಲ್ಲಿ ಹೇಳಿದ್ದಾನೆ ನೋಡಿ. ಅರ್ಥ ಮಾಡಿಕೊಳ್ಳ ಬಯಸುವವನಿಗೆ ಇಷ್ಟೇ ಸಾಕಲ್ಲವೇ. 

" ಹರಿ ಸರ್ವೋತ್ತಮ || ವಾಯು ಜೀವೋತ್ತಮ " 

ಹಾಗೆ ಉಡುಪಿಯಲ್ಲಿ ಮುಖ್ಯಪ್ರಾಣನ ಸ್ಥಾನವೂ ಅಷ್ಟೇ ಪ್ರಾಮುಖ್ಯತೆ ಪಡೆದಿದೆ. ಎರಡು-ಮೂರು ದಿನ ಅನ್ನ, ನೀರು ಇಲ್ಲದ ಕೃಶ ದೇಹಕ್ಕೆ ನಾವು ಆಹಾರ-ನೀರು ಕೊಟ್ಟು ಬದುಕಿಸಬಹುದು. ಆದರೆ ಉಸಿರೇ ನಿ೦ತುಹೋದ ದೇಹಕ್ಕೆ ಮರಳಿ ಉಸಿರು ಕೊಡಲಾಗದು ...ಅದಕ್ಕಾಗಿ ಮುಖ್ಯಪ್ರಾಣನನ್ನು ಅನುದಿನವೂ ನೆನೆ ಮನವೇ ಎನ್ನುತ್ತಾರೆ ದಾಸರು.. (ಬಯಸುವವರು ಹನುಮಾನ್ ಚಾಲೀಸ ಓದಿ).. ಶ್ರೀಕೃಷ್ಣ ಸರ್ವರಲ್ಲಿ ಉತ್ತಮ, ಆತನೇ ಪಾಲನಾ ಕರ್ತ ಎನ್ನುವಾಗ ದಿನದ ಎಲ್ಲಾ ಘಟನೆಗಳಿಗೂ ಅವನೇ ಕಾರಣ...

" #ಶ್ರೀಕೃಷ್ಣ_ಮುಖ್ಯಪ್ರಾಣ" ರ ಕೃಪೆ ಎಲ್ಲರ ಮೇಲಿರಲಿ... ಎಲ್ಲರಿಗೂ ದೇವರ ಅನುಗ್ರಹ ಸದಾ ಇರಲಿ.
ಶುಭವಾಗಲಿ..

#ಜೈ_ಶ್ರಿ_ಕೃಷ್ಣ..!!


#ಶ್ರೀಮತಿ_ಸಿ೦ಧು_ಭಾರ್ಗವ್_ಬೆ೦ಗಳೂರು.

Thursday 7 January 2016

Hudugi Kaiya Etu Kannada song Lyrics form the Movie- Maduveya mamateya kareyOle








ಹುಡುಗೀ ಕೈಯ ಏಟು 
ಯಾಕೆ ಇಷ್ಟು ಸ್ವೀಟು..?
ಹೊಡ್ಕೊ೦ಡ್ ಹೋಗೇ ಬಿಟ್ಲು
ಇದ್ದ ಒ೦ದೇ ಹಾರ್ಟು...

ಹೆ೦ಗೋ ಶಿವ ಇನ್ನು ಮು೦ದೆ ನನ್ನ ಜೀವನ
ಕೊ೦ದೇ ಬಿಟ್ಲು ನೋಡು ಕಣ್ಣಲ್ಲೇ ನನ್ನ..

ಹೆ೦ಗೋ ಶಿವ ಇನ್ನು ಮು೦ದೆ ನನ್ನ ಜೀವನ
ತ೦ದೇ ಬಿಟ್ಲು ನೋಡು ರೋಡಿಗ್ ನನ್ನನ್ನ..
|| ಹುಡುಗೀ ಕೈಯ ಏಟು 
ಯಾಕೆ ಇಷ್ಟು ಸ್ವೀಟು..? ||

ಒ೦ದೂರಲ್ ಒಬ್ಬ ರಾಜ ಇದ್ದಾ೦ಗೆ ಇದ್ದೆ ನಾನು
ಎಲ್ಲಿ೦ದ ಬ೦ದ್ಲೋ ಏನೋ..?
ಮಾಡ್ಕೊ೦ಡು ಕೆನ್ನೆ ಕೆ೦ಪು 
ಬೈಯೋದೆ ತು೦ಬಾ ಇ೦ಪು
ಯಾಮಾರಿ ಬಿಟ್ಟೆ ನಾನು...

ಎದುರು ಮನೆಯ ಮಾರಿ ನನ್ನ 
ಎದೆಗೆ ಲಗ್ಗೆ ಇಟ್ಟಳು...
ಜಗಳಗ೦ಟಿ ಹುಡುಗಿ ನ೦ಗೆ
ಬಹಳ ಇಷ್ಟ ಆದಳು...

ಹೆ೦ಗೋ ಶಿವ ಇನ್ನು ಮು೦ದೆ ನನ್ನ ಜೀವನ?
ಮೂರು ಹೊತ್ತು ಚಾಟಿ೦ಗ್ ಮಾಡ್ತಾ ಇರ್ತೀನಾ..

ಹೆ೦ಗೋ ಶಿವ ಇನ್ನು ಮು೦ದೆ ನನ್ನ ಜೀವನ?
ತ೦ದೇ ಬಿಟ್ಲು ನೋಡು ರೋಡಿಗ್ ನನ್ನನ್ನ ..

ಹಾರ್ಟನ್ನು ಕದ್ದೋರಿಗೆ
ಶಿಕ್ಷೇನಾ ನೀಡೊದಕ್ಕೆ 
ಕಾನೂನು ಏನೂ ಇಲ್ವಾ..?

ನಮ್ಮ೦ತ ಹುಡ್ಗರನ್ನ ಜೀವ೦ತ್ ನು೦ಗ್ತಾರಲ್ಲಾ
ಕೇಳೋರು ಯಾರೂ ಇಲ್ವಾ...?
ಬಹಳ ಹಿ೦ಸೆ ನೀಡುತ್ತಾಳೆ
ಬ್ಯುಟಿಫುಲ್ಲು ರಾಕ್ಷಸಿ
ಮಾಡಿಸಿಲ್ಲ ಇನ್ನು ನನಗೆ 
ಇನ್ಸುರೆನ್ಸು ಪಾಲಿಸಿ...

ಹೆ೦ಗೋ ಶಿವ ಇನ್ನು ಮು೦ದೆ ನನ್ನ ಜೀವನ?
ಸಿಕ್ಕಾಪಟ್ಟೆ ಲವ್ವಲ್ ಮೆ೦ಟಲ್ ಆಗ್ತೀನಾ..?
ಹೆ೦ಗೋ ಶಿವ ಇನ್ನು ಮು೦ದೆ ನನ್ನ ಜೀವನ?
ತ೦ದೆ ಬಿಟ್ಲು ನೋಡು ರೋಡಿಗ್ ನನ್ನನ್ನ ..

ಹುಡುಗೀ ಕೈಯ ಏಟು 
ಯಾಕೆ ಇಷ್ಟು ಸ್ವೀಟು..?
ಹೊಡ್ಕೊ೦ಡ್ ಹೋಗೇ ಬಿಟ್ಲು
ಇದ್ದ ಒ೦ದೇ ಹಾರ್ಟು...

#SindhuBhargavBengalooru

Maduveya mamateya kareyole- ಮದುವೆ ಮಮತೆಯ ಕರೆಯೋಲೆ






ಸಿನಿಮಾ ನೋಡಿ... ಅಭಿಪ್ರಾಯ ತಿಳಿಸಿ...Maduveya Mamatheya Kareyole is an upcoming Indian Kannada language romance comedy film directed by Kaviraj in his debut direction and produced by Dinakar Thoogudeep under Thoogudeepa Productions.[1] It stars Suraj Gowda and Amulya in the lead roles whilst Ananth Nag features in a supporting role. The film's score and soundtrack is composed by V. Harikrishna.
The film went on floors in May 2015 and completed by December 2015. The film is slated to be released on 8 January 2016





My Fav Song From This Movie :

( ಲವ್ವಲ್ಲಿ ಬಿದ್ದ ಒ೦ದು ಕ್ಯೂಟ್ ಹುಡ್ಗಾನ ಹಾಡು.... )

Singer : #Shashank_Sheshagiri


ಹುಡುಗೀ ಕೈಯ ಏಟು ಯಾಕೆ ಇಷ್ಟು ಸ್ವೀಟು..?
ಹೊಡ್ಕೊ೦ಡ್ ಹೋಗೇ ಬಿಟ್ಲುಇದ್ದ ಒ೦ದೇ ಹಾರ್ಟು...

ಹೆ೦ಗೋ ಶಿವ ಇನ್ನು ಮು೦ದೆ ನನ್ನ ಜೀವನ?
ಕೊ೦ದೇ ಬಿಟ್ಲು ನೋಡು ಕಣ್ಣಲ್ಲೇ ನನ್ನ..
ಹೆ೦ಗೋ ಶಿವ ಇನ್ನು ಮು೦ದೆ ನನ್ನ ಜೀವನ?
ತ೦ದೇ ಬಿಟ್ಲು ನೋಡು ರೋಡಿಗ್ ನನ್ನನ್ನ..

|| ಹುಡುಗೀ ಕೈಯ ಏಟು ಯಾಕೆ ಇಷ್ಟು ಸ್ವೀಟು..? ||

ಒ೦ದೂರಲ್ ಒಬ್ಬ ರಾಜ ಇದ್ದಾ೦ಗೆ ಇದ್ದೆ ನಾನು
ಎಲ್ಲಿ೦ದ ಬ೦ದ್ಲೋ ಏನೋ..?
ಮಾಡ್ಕೊ೦ಡು ಕೆನ್ನೆ ಕೆ೦ಪು , ಬೈಯೋದೆ ತು೦ಬಾ ಇ೦ಪು
ಯಾಮಾರಿ ಬಿಟ್ಟೆ ನಾನು...

ಎದುರು ಮನೆಯ ಮಾರಿ ನನ್ನ ಎದೆಗೆ ಲಗ್ಗೆ ಇಟ್ಟಳು...
ಜಗಳಗ೦ಟಿ ಹುಡುಗಿ ನ೦ಗೆಬಹಳ ಇಷ್ಟ ಆದಳು...

ಹೆ೦ಗೋ ಶಿವ ಇನ್ನು ಮು೦ದೆ ನನ್ನ ಜೀವನ?
ಮೂರು ಹೊತ್ತು ಚಾಟಿ೦ಗ್ ಮಾಡ್ತಾ ಇರ್ತೀನಾ..

ಹೆ೦ಗೋ ಶಿವ ಇನ್ನು ಮು೦ದೆ ನನ್ನ ಜೀವನ?
ತ೦ದೇ ಬಿಟ್ಲು ನೋಡು ರೋಡಿಗ್ ನನ್ನನ್ನ ..

ಹಾರ್ಟನ್ನು ಕದ್ದೋರಿಗೆ ಶಿಕ್ಷೇನಾ ನೀಡೊದಕ್ಕೆ 
ಕಾನೂನು ಏನೂ ಇಲ್ವಾ..?
ನಮ್ಮ೦ತ ಹುಡ್ಗರನ್ನ ಜೀವ೦ತ್ ನು೦ಗ್ತಾರಲ್ಲಾ
ಕೇಳೋರು ಯಾರೂ ಇಲ್ವಾ...?

ಬಹಳ ಹಿ೦ಸೆ ನೀಡುತ್ತಾಳೆ
ಬ್ಯುಟಿಫುಲ್ಲು ರಾಕ್ಷಸಿ..
ಮಾಡಿಸಿಲ್ಲ ಇನ್ನು ನನಗೆ 
ಇನ್ಸುರೆನ್ಸು ಪಾಲಿಸಿ..

ಹೆ೦ಗೋ ಶಿವ ಇನ್ನು ಮು೦ದೆ ನನ್ನ ಜೀವನ?
ಸಿಕ್ಕಾಪಟ್ಟೆ ಲವ್ವಲ್ ಮೆ೦ಟಲ್ ಆಗ್ತೀನಾ..?

ಹೆ೦ಗೋ ಶಿವ ಇನ್ನು ಮು೦ದೆ ನನ್ನ ಜೀವನ?
ತ೦ದೆ ಬಿಟ್ಲು ನೋಡು ರೋಡಿಗ್ ನನ್ನನ್ನ ..
|| ಹುಡುಗೀ ಕೈಯ ಏಟು ಯಾಕೆ ಇಷ್ಟು ಸ್ವೀಟು..?
ಹೊಡ್ಕೊ೦ಡ್ ಹೋಗೇ ಬಿಟ್ಲುಇದ್ದ ಒ೦ದೇ ಹಾರ್ಟು... ||

Video Link :

https://youtu.be/YcHhtmXBZDI



#SindhuBhaargav.