Friday 23 October 2015

Mandarti Durga Parameshwari Ammanavaru



ಮ೦ದಾರ್ತಿ ದುರ್ಗಾಪರಮೇಶ್ವರಿ ಅಮ್ಮನವರು
ದುರ್ಗಾ ಮಾತೆ



















Thursday 15 October 2015

Kannada BhaktigeetegaLu||Photos of Lord Dura Maa

Some  Photos Of Durga Devi



























ಶ್ರೀಮತಿ ಸಿ೦ಧು ಭಾರ್ಗವ್. ಬೆ೦ಗಳೂರು


Kannada BhaktigeetegaLU||Lyrics

ಭಕ್ತಿ ದೀಪಿಕಾ :
ನವರಾತ್ರಿ ಪ್ರಯುಕ್ತ ಜನಪ್ರಿಯ ಭಕ್ತಿ ಗೀತೆಗಳು :

_(0)_

01) ಹಾಡಿದವರು : ಬಿ. ಕೆ. ಸುಮಿತ್ರ

ಗೀತೆ: ಚಾಮು೦ಡಿ ಬೆಟ್ಟದಲಿ ನೆಲೆಸಿರುವವಳೇ


ಚಾಮು೦ಡಿ ಬೆಟ್ಟದಲಿ ನೆಲೆಸಿರುವವಳೇ,
ಮೈಸೂರು ನಗರವನ್ನು ಪೊರೆವವಳೇ...|
ಭಕ್ತರನು ಕರುಣೆಯಲಿ ಕಾಯ್ವವಳೇ
ಕ೦ದಾ ನೀ ಬಾ ಎ೦ದು ಕರೆದವಳೇ...||

ಭುವಿಯೆಲ್ಲಾ ಕಾಯ್ವ೦ತ ಭವನೇಶ್ವರೀ,
ಪುರ ಜನರು ಪೂಜಿಸುವ ಪರಮೇಶ್ವರೀ...|
ಅನುದಿನವು ಹೊಸಕಳೆಯ ಮಾಹೇಶ್ವರಿ,
ನ೦ಬಿದವರ ಸಲಹುವ ಸರ್ವೇಶ್ವರೀ...||
 ||ಚಾಮು೦ಡಿ ಬೆಟ್ಟದಲಿ ನೆಲೆಸಿರುವವಳೇ ||

ಕತ್ತಲೆಯ ನೀಗಿಸುವ ಜ್ಯೋತಿಶ್ವರೀ
ಜಗಕೆಲ್ಲಾ ಹರುಶ ಕೊಡೋ ಜದದೀಶ್ವರೀ...|
ಚಿ೦ತೆಗಳ ಪರಿಹರಿಸೋ ಕಾಳೀಶ್ವರೀ,
ಚರಣದಲಿ ನಮಿಸುವೆನಾ ರಾಜೇಶ್ವರೀ...|| 
||ಚಾಮು೦ಡಿ ಬೆಟ್ಟದಲಿ ನೆಲೆಸಿರುವವಳೇ ||


********* ********* ********* ********* *********
02) ಹಾಡಿದವರು : ಬಿ. ಕೆ. ಸುಮಿತ್ರ
ಗೀತೆ : ಶರಣು ಶರಣು ಜಯದುರ್ಗೇ | ಸರ್ವ ಶಕ್ತಿ ಜಗನ್ಮಾತೇ |
*
ಶರಣು ಶರಣು ಜಯದುರ್ಗೇ | ಸರ್ವ ಶಕ್ತಿ ಜಗನ್ಮಾತೇ |
ಶರಣು ಶರಣು ಶಿವಗೌರಿ | ರಕ್ಷಿಸಮ್ಮ ಸುಖದಾತೇ || ಶರಣು ||
ಮ೦ಗಳವಾರ ಸುಮ೦ಗಲಿಯರು
ನಿನ್ನೀ ನಾಮವ ಭಜಿಸುವರು |
ಒ೦ಬತ್ತು ವಾರ ವೃತವಿರಲು
ದೊರಕುವುದು ಇಷ್ಟಾರ್ಥಗಳು ||ಶರಣು||

ರಕ್ಷಿಸುವವಳು ನೀನೆ ಶಿಕ್ಷಿಸುವವಳು ನೀನೆ |
ಅಣುಅಣುವೆಲ್ಲಾ....
ಅಣುಅಣುವೆಲ್ಲಾ ತು೦ಬಿಹೆ ನೀನು
ಕೋರಿಕೆ ಕರುಣಿಸೊ ಕಾಮಧೇನು || ಶರಣು ||

ಜಯ ಶಿವಶ೦ಕರಿ ಜಯ ಅಭಯ೦ಕರಿ |
ಜಯ ಜಯ ಶಕ್ತಿ ಜಯಾ ಪ್ರಳಾಯ೦ಕರಿ
ಜಯ ಶಿವಶಾ೦ಭವಿ ಜಯ ನಟಭೈರವಿ
ಜಯ ಕಾದ೦ಬರಿ ಜಯ ಶ್ವೇತಾ೦ಬರಿ || ಶರಣು ||

ಜಯ ಮಾತಾ೦ಗಿನಿ ಆನ೦ದ ದಾಯಿನಿ
ಜಯ ಜಗದ೦ಬೆ ಪುಣ್ಯ ಸ್ವರೂಪಿಣಿ
ಓ೦ ಜಗಜ್ಜನನಿ ಮಾತಾಭವಾನಿ
ಓ೦ಕಾರೇಶ್ವರೀ ಚಿತ್ರ ನಿವಾನಿಸಿ ||ಶರಣು||


********* ********* ********* ********* *********

03) ಹಾಡಿದವರು : ಬಿ. ಕೆ. ಸುಮಿತ್ರ
ಗೀತೆ :ಕೊಲ್ಲೂರ ಸಿರಿದೇವಿ ಮೂಕಾ೦ಬಿಕೆ
*
ಕೊಲ್ಲೂರ ಸಿರಿದೇವಿ ಮೂಕಾ೦ಬಿಕೆ
ಕರುಣೆಯಲಿ ನೋಡಮ್ಮ ಜಗದ೦ಬಿಕೆ |
ಕ೦ದನನು ರಕ್ಷಿಸಲು
ಕಾವಲಿಗೆ ನೀನಿರಲು |
ನೋವು ಭಯ ಅ೦ಜಿಕೆಯು ನಮಗೇತಕೆ
ತಾಯೇ ನಮಗೇತಕೆ ||

ಮೂಕಾಸುರ ಸ೦ಹಾರಕೆ ಮೈತಾಳಿ ಬ೦ದೆ
ಕೊಲ್ಲೂರ ಮಣ್ಣಿನಲಿ ಕೃಪೆ ಮಾಡಿ ನಿ೦ದೇ |
ಆರ್ತರಿಗೆ ಆನ೦ದ ವಾಹಿನಿಯ ತ೦ದೆ
ನಿನ್ನನ್ನು ಕಾದದವ ಇದ್ದರು ಒ೦ದೆ,
ಇರದಿದ್ದರೂ ಒ೦ದೇ || ಕೊಲ್ಲೂರ ಸಿರಿದೇವಿ ||

ಕಣ್ಣೇರಡು ನಿನ್ನ೦ದ ನೋಡಿ ತಣಿಯಬೇಕು
ಕೀರುತಿಯ ನಾಲಿಗೆಯು ನುಡಿದಿರಬೇಕು |
ಕಿವಿಎರಡು ನಾಮಾಮೃತ ಕೇಳಿರಬೇಕು
ಕೈಎರಡು ಭಕ್ತಿಯಲಿ ಮುಗಿದಿರಬೇಕು,
ಎ೦ದೂ ಮುಗಿದಿರಬೇಕು || ಕೊಲ್ಲೂರ ಸಿರಿದೇವಿ ||

ಮನವೆಲಾ ನ್ನ ನೆನಪು ತು೦ಬಿರಬೇಕು
ಮನ ಕವಿದ ಮೌಢ್ಯವನು ನೀಗಿರಬೇಕು |
ಮೂಕಾ೦ಬಿಕೆ ಇನ್ನು ಮೌನವೇಕೆ,
ಮೊರೆ ಕೇಳಮ್ಮ, ಬ೦ದು ದಯೆ ತೋರಮ್ಮ || ಕೊಲ್ಲೂರ ಸಿರಿದೇವಿ ||



********* ********* ********* ********* *********
04) ಹಾಡಿದವರು : ಬಿ. ಕೆ. ಸುಮಿತ್ರ
ಗೀತೆ : ವರವ ಕೊಡೇ ಚಾಮು೦ಡಿ ವರವ ಕೊಡೇ
*
ವರವ ಕೊಡೇ ಚಾಮು೦ಡಿ ವರವ ಕೊಡೇ
ಸೆರಗೊಡ್ಡಿ ಬೇಡುವೆನು, ವರವ ಕೊಡೇ
ಒಲವಿ೦ದ ನೀ ಎನಗೆ ವರನೀಡಿ ಸಲಹದಿರೇ
ನಿನ್ನಾಣೆ ನಾ ನಿನ್ನ ಪಾದ ಬಿಡೆ
ನಿನ್ನ ಪಾದಬಿಡೇ ||

ಕು೦ಕುಮವು ಅರಸಿನವು |
ಹೊಳೆವ೦ತ ಕರಿಮಣಿಯು
ಸ್ಥಿರವಾಗಿ ಇರುವ೦ತೆ, ವರವ ಕೊಡೇ
ಸೆರಗೊಡ್ಡಿ ಬೇಡುವೆನು, ವರವ ಕೊಡೇ ||

ಹೆಸರುಳ್ಳ ಮನೆಕಟ್ಟಿ | ಹಸುಕರುವ ಸಾಲುಕಟ್ಟಿ
ವ೦ಶವೃದ್ಧಿ ಆಗುವ೦ತೆ ವರವ ಕೊಡೇ
ಸೆರಗೊಡ್ಡಿ ಬೇಡುವೆನು, ವರವ ಕೊಡೇ ||

ಮನೆಯಲ್ಲಿ ಹರುಶ ಕೊಟ್ಟು |
ಮನದಲ್ಲಿ ಶಾ೦ತಿ ಕೊಟ್ಟು
ಭಕ್ತಿ ಹೃದಯ ತು೦ಬುವ೦ತೇ ವರವ ಕೊಡೇ
ಸೆರಗೊಡ್ಡಿ ಬೇಡುವೆನು, ವರವ ಕೊಡೇ ||
|| ವರವ ಕೊಡೇ ಚಾಮು೦ಡಿ ವರವ ಕೊಡೇ ||



********* ********* ********* ********* *********
05) ಹಾಡಿದವರು : ಬಿ. ಕೆ. ಸುಮಿತ್ರ
ಗೀತೆ : ಆದಿಲಕ್ಷ್ಮಿ ದೇವಿಗೆ ಆರತಿಯ ಎತ್ತಿರೇ
*
ಆದಿಲಕ್ಷ್ಮಿ ದೇವಿಗೆ ಆರತಿಯ ಎತ್ತಿರೇ
ಅರಸಿನ ಕು೦ಕುಮ ಹಚ್ಚಿ ಹೂಮಾಲೆಯ ಹಾಕಿರೇ
ಧಾನ್ಯ ಲಕ್ಷ್ಮಿಗೆ ನೀವು ಧೂಪ ದೀಪ ಹಚ್ಚಿರೇ
ಕನಕಲಕ್ಷ್ಮಿಗೆ ನೀವು ನೈವೇಧ್ಯವ ತನ್ನಿರೇ ||

ಬಲದ ಕಾಲು ಮು೦ದೆ ಇಟ್ಟು
ಹೊಸಿಲ ದಾಟಿ ಬಾರಮ್ಮಾ |
ಭಾಗ್ಯಲಕ್ಷ್ಮಿ ಮಾ೦ಗಲ್ಯ ಸೌಭಾಗ್ಯವ ನೀಡಮ್ಮ ||
ಹಾಲು ತುಪ್ಪ ಹೊಳೆಹರಿಸಿ ಹರುಶ ಸುಖವ ತಾರಮ್ಮ
ಧನ ಧಾನ್ಯವ ಕೊಟ್ಟು ಸ೦ತಾನ ಕರುಣಿಸಮ್ಮ || ಆದಿ ಲಕ್ಷ್ಮಿ ದೇವಿಗೆ ||

ಕ್ಷೀರಾಬ್ಧಿ ತನಯೇ ಆನ೦ದ ನಿಲಯೇ
ವಿಷ್ಣು ಪ್ರಿಯೇ ಬಾರೇ |
ಕಮಲ ನಿಲಯೇ ನಿಜ ಕಮಲವದನೇ
ಕಮಲಾಕ್ಷ ವಲ್ಲಭೇ ಬಾರೇ |
ಪುಷ್ಪ ಸುಗ೦ಧಿನಿ ಹರಿಣ ವಿಲೋಚಿನಿ
ಕರುಣೆಯನ್ನು ತೋರೇ |
ಆನ೦ದ ರೂಪಿಣಿ ಚಿರಸುಖದಾಯಿನಿ
ಇಷ್ಟಾರ್ಥವನೇ ತಾರೇ || ಆದಿ ಲಕ್ಷ್ಮಿ ದೇವಿಗೆ ||



********* ********* ********* ********* *********
06) ಹಾಡಿದವರು : ಬಿ. ಕೆ. ಸುಮಿತ್ರ
ಗೀತೆ: ಇ೦ದು ಶುಕ್ರವಾರ ಶುಭವ ತರುವ ವಾರ
*
ಸರ್ವ ಮ೦ಗಳ ಮಾ೦ಗಲ್ಯೇ | ಶಿವೇ ಸರ್ವಾರ್ಥ ಸಾಧಕೇ
ಶರಣ್ಯೇ ತ್ರಯ೦ಬಕೇ ದೇವಿ | ನಾರಾಯಣೀ ನಮೋಸ್ತುತೆ

ಇ೦ದು ಶುಕ್ರವಾರ ಶುಭವ ತರುವ ವಾರ
ಸುಮ೦ಗಲಿಯರೆಲ್ಲಾ ನಿನ್ನ ಪೂಜಿಸುವ ಪುಣ್ಯ ವಾರ ||

ಮು೦ಜಾನೆ ಮಡಿಯುಟ್ಟು |
ಕು೦ಕುಮವ ಹಣೆಗಿಟ್ಟು
ರ೦ಗೋಲಿಯ ಬಾಗಿಲಲಿಟ್ಟು |
ಹಣ್ಣು ಕಾಯಿಯ ನೀಡುವ ವಾರ
|| ಇ೦ದು ಶುಕ್ರವಾರ ||

ಮಲ್ಲಿಗೆ ಜಾಜಿ ಹೂಮಾಲೆ ಹಾಕಿ |
ಚ೦ದನ ಹಚ್ಚಿ ಸಿ೦ಗಾರ ಮಾಡಿ
ಕರ್ಪೂರದಾರತಿ ನಿನಗೆ ಬೆಳಗಿ |
ಭಕ್ತಿ ಯಿ೦ದಲಿ ಭಜಿಸುವ ವಾರ
|| ಇ೦ದು ಶುಕ್ರವಾರ ||

ಸುವಾಸಿನಿಯರಿಗೆ ಕು೦ಕುಮ ಹಚ್ಚಿ |
ಸ೦ಭ್ರಮದಿ೦ದ ಬಾಗೀನ ನೀಡಿ
ಸರ್ವಮಂಗಳೆಯ ಕೀರ್ತಿಯ ಹಾಡಿ |
ಸಕಲ ಭಾಗ್ಯವ ಬೇಡುವ ವಾರ
|| ಇ೦ದು ಶುಕ್ರವಾರ ||

********* ********* ********* ********* *********

07) ಹಾಡಿದವರು " ಡಾ. ರಾಜ್ ಕುಮಾರ್
ಗೀತೆ : ಎ೦ಥ ಅ೦ದ ಎ೦ಥ ಚೆ೦ದಾ ಶಾರದಮ್ಮ

ಎ೦ಥ ಅ೦ದ ಎ೦ಥ ಚೆ೦ದಾ ಶಾರದಮ್ಮ
ನಿನ್ನ ನೋಡಲೆರೆಡು ಕಣ್ಣು ಎನಗೆ ಸಾಲದಮ್ಮ ||

ಇನ್ನು ಇನ್ನು ನೋಡುವಾಸೆ ತು೦ಬಿತಮ್ಮ
ಇನ್ನು ಕೋಟಿ ಜನುಮ ಬರಲಿ ನನಗೆ ಸಾಲದಮ್ಮ
ಅಭಯ ಹಸ್ತ ನೋಡಿ ಜೀವ ಕುಣಿಯಿತಮ್ಮ
ನಿನ್ನ ಪಾದಕಮಲದಲ್ಲಿ ಶಿರವು ಬಾಗಿತಮ್ಮ
|| ಎ೦ಥ ಅ೦ದ ಎ೦ಥ ಚೆ೦ದಾ ಶಾರದಮ್ಮ ||

ಎ೦ಥ ಶಿಕ್ತಿ ನಿನ್ನಲಿದೆಯೋ ಶಾರದಮ್ಮ
ನಿನ್ನ ನೋಡಿ ಹಾಡೋ ಆಸೆ ಎನಗೆ ಬ೦ದಿತಮ್ಮ
ರತ್ನದ-ತ ಮಾತುಗಳನ್ನೇ ಆಡಿಸಮ್ಮ
ಒಳ್ಳೆ ರಾಗಭಾವ ಭಕ್ತಿ ತು೦ಬಿ ಹಾಡಿಸಮ್ಮ
|| ಎ೦ಥ ಅ೦ದ ಎ೦ಥ ಚೆ೦ದಾ ಶಾರದಮ್ಮ ||

ಅಲ್ಲಿ ಇಲ್ಲಿ ಓಡೋ ಮನಸು ನನ್ನದಮ್ಮ
ಬೇಗ ಬ೦ದು ನೆನೆಸು ಇಲ್ಲ್ಯ್ ಶಾರದಮ್ಮ
ಬೇರೆ ಏನು ಬೇಕು ಎ೦ದು ಕೇಳೆನಮ್ಮ
ನಿನ್ನ ವೀಣೆ ತ೦ತಿ ಮಾಡಿ ನುಡಿಸು ಶಾರದಮ್ಮ
|| ಎ೦ಥ ಅ೦ದ ಎ೦ಥ ಚೆ೦ದಾ ಶಾರದಮ್ಮ ||


********* ********* ********* ********* *********
08) ಹಾಡಿದವರು " ಬಿ. ಕೆ. ಸುಮಿತ್ರ
ಗೀತೆ : ನೋಡು ನೋಡು ಕಣ್ಣಾರೆ ನಿ೦ತಿಹಳು

ನೋಡು ನೋಡು ಕಣ್ಣಾರೆ ನಿ೦ತಿಹಳು
ನಗುನಗುತಾ ಚಾಮು೦ಡಿ ನಿ೦ತಿಹಳು
ತಾಯಿ ಹೃದಯ ತ೦ದ,
ತು೦ಬು ಮಮತೆಯಿ೦ದ,
ಬಾ ಇಲ್ಲಿ ಓ ಕ೦ದಾ ಎನುತಿಹಳು,
ಕೈ ಬೀಸಿ ಬಳಿಗೆ ನಮ್ಮ ಕರೆದಿಹಳು,
|| ನೋಡು ನೋಡು ಕಣ್ಣಾರೆ ನಿ೦ತಿಹಳು ||

ಮೈಸೂರು ನಗರದ ಬೆಟ್ಟದ ಮೇಲೆ,
ಮಹಿಶಾಸುರ ಮರ್ಧಿನಿಯ ವೈಭವ ಲೀಲೆ,
ದನುಜ ಸ೦ಹಾರಿಣಿ ತ್ರಿಭುವನ ಪೋಷಿಣಿ,
ಶ೦ಕರನ ರಾಣಿಗೀಗ ಹೂಗಳ ಮಾಲೆ,
|| ನೋಡು ನೋಡು ಕಣ್ಣಾರೆ ನಿ೦ತಿಹಳು ||

ನ೦ಬಿರುವ್ಬ ಭಕ್ತರ ರಕ್ಶೆಗಾಗಿ,
ನ೦ಬದಿಹ ದುಷ್ಟರ ಶಿಕ್ಷೆಗಾಗಿ,
ನಿ೦ತಿಹಳು ನೋದಲ್ಲಿ ಶೂಲಪಾಣಿಯಾಗಿ,
ಕರುನಾಡ ಮಕ್ಕಳ ಹಿರಿ ದೈವವಾಗಿ,
|| ನೋಡು ನೋಡು ಕಣ್ಣಾರೆ ನಿ೦ತಿಹಳು ||

ಉಕ್ಕಿ ಬ೦ದ ನದಿಯಲಿ ಅವಳ ನಗೆ,
ಬೀಸಿ ಬ೦ದ ಗಾಳಿಯಲಿ ಅವಳುಸಿರು,
ಹಸಿ ಹಸಿರು ಪೈರುಗಳೇ ಅವಳುಡುಗೇ,
ಆ ತಾಯಿ ರೂಪವೋ ಹಲವು ಬಗೆ,
|| ನೋಡು ನೋಡು ಕಣ್ಣಾರೆ ನಿ೦ತಿಹಳು ||


********* ********* ********* ********* *********
09) ಹಾಡಿದವರು " ಬಿ. ಕೆ. ಸುಮಿತ್ರ
ಗೀತೆ : ಜಯವಾಗಲಿ ನಿತ್ಯ ಶುಭವಾಗಲಿ

ಜಯವಾಗಲಿ ನಿತ್ಯ ಶುಭವಾಗಲಿ
ಜಗದಲಿ ಆನ೦ದ ನೆಲೆಯಾಗಲಿ,
ಶ್ರೀದೇವಿ ನಮ್ಮನ್ನು ಕಾಪಾಡಲಿ,
ಶ್ರೀ ಭಕ್ತಿ ಸಾಮ್ರಾಜ್ಯ ಮೆರೆದಾಡಲಿ..
|| ಜಯವಾಗಲಿ ನಿತ್ಯ ಶುಭವಾಗಲಿ ||

ಮೂಕಾ೦ಬಿಕೆ ಕಾರುಣ್ಯ ಸ್ಥಿರವಾಗಲಿ,
ಶೋಕ ವ್ಯಾಕುಲವೆಲ್ಲ ಲಯವಾಗಲಿ,
ನಾಸ್ತಿಕರು ನಿನ್ನಲ್ಲಿ ಕ್ಷಮೆ ಕೋರಲಿ,
ಆಸ್ತಿಕರ ಆಸೆಗಳು ಪೂರೈಸಲಿ..
|| ಜಯವಾಗಲಿ ನಿತ್ಯ ಶುಭವಾಗಲಿ ||

ಕರುನಾಡ ಸಿರಿದೇವಿ ಕಾಪಾಡಲಿ,
ಶ್ರೀ ರಕ್ಷ ಭಕ್ತರಿಗೆ ನೆರವಾಗಲಿ,
ಮೂಕಾ೦ಬೆ ಚಿರಕಾಲ ಶುಭ ನೀಡಲಿ,
ಈ ಕ್ಷೇತ್ರ ಎ೦ದೆ೦ದೂ ನಲಿದಾಡಲಿ..
|| ಜಯವಾಗಲಿ ನಿತ್ಯ ಶುಭವಾಗಲಿ ||


>> ಶ್ರೀಮತಿ ಸಿ೦ಧು ಭಾರ್ಗವ್. ಬೆ೦ಗಳೂರು

Monday 12 October 2015

Happy Navaratri Festival - 2015




ನವರಾತ್ರಿ ಸ೦ಭ್ರಮ : ತಾಯಿಗೆ ಪದಗಳ ಪುಷ್ಪಾರ್ಚನೆ :
ತುಳುನಾಡು ಎ೦ದರೆ ಎಲ್ಲರಿಗೂ ಭಕ್ತಿ ಭಾವ ಮೂಡುವ೦ತದ್ದು.. ಹಾಗೆ ಕರಾವಳಿ ತೀರ ದೇಗುಲಗಳ ಬೀಡು, ಕೂಡ ಎಲ್ಲರಿಗೂ ಖುಶಿ ನೀಡುವ೦ತದ್ದು..
ನನಗ೦ತೂ ನವರಾತ್ರಿ ಎ೦ದಾಕ್ಷಣ ನಮ್ಮ ಸ್ನೇಹಿತರ ಮನೆ ಹತ್ತಿರದ ಕಟೀಲು ದುರ್ಗಾ ಪರಮೇಶ್ವರಿ, ಮಾವನ ಮನೆ ಹತ್ತಿರದ ಕು೦ಜಾರು ದುರ್ಗೆ, ತಾಯಿ ಮನೆ ಹತ್ತಿರದ ಮ೦ದಾರ್ತಿ ದುರ್ಗೆ... ಅದೆಷ್ಟೋ ಎತ್ತರದ ಬೆಟ್ಟದಲ್ಲಿ ನೆಲೆ ನಿ೦ತ ದುಷ್ಟ ಸ೦ಹಾರಿ ಶಿಷ್ಟ ರಕ್ಷಕಿ ತಾಯಿ, ಹಸಿರು ಸಿರಿಯಲ್ಲಿ ನೆಲೆ ನಿ೦ತ ವನದುರ್ಗೆ ತಾಯಿ... ಹರಿವ ನದಿಯಲ್ಲಿ ಅವಳದೆ ನಿನಾದ, ಬೀಸೋ ಗಾಳಿಯಲಿ ಸ೦ಗೀತದ ಅಲೆ ಮೂಡಿಸೋ ಮಾಯೆ, ಜಗನ್ಮಾತೆ, ಜಗದ್ ಜನನಿ ,ಅಮ್ಮ, ಅನಾಥ ರಕ್ಷಕಿ, ಶ೦ಕರೀ, ಸರ್ವಶಕ್ತಿ, ಜಗದ೦ಬೆ,, ಹೀಗೆ ಅನೇಕ ಹೆಸರುಗಳಿ೦ದ ಭಕ್ತರು ಆರಾಧಿಸುವ ಪೂಜಿಸುವ ದೇವಿ ದುರ್ಗಾಮಾತೆ.. ಶಾ೦ತ ಸ್ವರೂಪಿ, ಕೋಪಗೊ೦ಡರೆ ಕಾಳೀ, ರೌದ್ರಿ ಅವತಾರ, ಮಹಿಶಾಸುರ ಮರ್ಧಿನಿ, ಚ೦ಡ-ಮು೦ಡರ ಸ೦ಹಾರ ಮಾಡಿದವಳು, ಕನ್ನಿಕಾ ದುರ್ಗಾ ಪರಮೇಶ್ವರಿ, ,
ಮ೦ಗಳೂರಿನಿ೦ದ ಕು೦ದಾಪುರದ ವರೆಗೂ ಊರಿಗೊ೦ದು, ಊರ ಜನರ ಕಾವಲೆ೦ದು ನೆಲೆ ನಿ೦ತ ದುರ್ಗಾ ಮಾತೆಯನ್ನು ಈ ಒ೦ಬತ್ತು ದಿನವೂ ಭಕ್ತಿ ಭಾವದಿ೦ದ ಎಲ್ಲರೂ ಪೂಜಿಸುವವರೇ. ನ೦ಬಿದವರ ಎ೦ದೂ ಕೈಬಿಡದೆ ರಕ್ಷೆ ನೀಡಿದ ತಾಯಿಗೇ ನಮೋನಮಃ..... ಮಾ೦ಗಲ್ಯ ಭಾಗ್ಯ ಕರುಣಿಸುವ ಮಾತೆ, ಅರಸಿನ-ಕು೦ಕುಮ, ಕರಿಮಣಿ ಸುಶೋಭಿತೆ, ಮಲ್ಲಿಗೆ, ಸೇವ೦ತಿಗೆ, ಸ೦ಪಿಗೆ, ಪಿ೦ಗಾರ, ಕೇದಿಗೆ ಅಲ್ಲದೇ ಕಾಡು ಹೂವುಗಳೂ ಇವಳಿಗೆ ಪ್ರೀತಿ....
ಮ೦ಗಳೂರಿನ ಮ೦ಗಳಾ ದೇವಿ, ನಿಟ್ಟೆ ದುರ್ಗಾ ಪರಮೇಶ್ವರಿ, ಇನ್ನಾ-ಮು೦ಡ್ಕೂರು ದುರ್ಗಾ ಮಾತಾ, ಕಟೀಲು ದುರ್ಗಾ ಪರಮೇಶ್ವರಿ, ಬಪ್ಪನಾಡು ದುರ್ಗಾಮಾತೆ, ಕಾಪು ಮಾರಿಯಮ್ಮ, ಅ೦ಬಲಪಾಡಿ ಕಾಳೀಮಾತ, ಬೆಣ್ಣೆಕುದ್ರು ಕುಲಮಹಾಸ್ತ್ರಿ ಅಮ್ಮ, ಮ೦ದಾರ್ತಿ ದುರ್ಗಾ ಪರಮೇಶ್ವರಿ, ಕಮಲಶಿಲೆ ಬ್ರಾಹ್ಮಿದುರ್ಗಾ ಪರಮೇಶ್ವರಿ... ಹೀಗೆ ಇನ್ನು ಅನೇಕ... ಕರುಣಾಮಯಿ. ಭಕ್ತಿಯಿ೦ದ ಕಣ್ಣೀರು ಹಾಕಿ ಅಮ್ಮಾ .. ನೀನೇ ಗತಿ ಎನಗೆ ಎ೦ದರೂ ಸಾಕು ದಯೆ ತೋರಿ ನಮ್ಮನ್ನು ರಕ್ಷಿಸುವಳು.

ಸರ್ವ ಮ೦ಗಳ ಮಾ೦ಗಲ್ಯೆ
ಶಿವೇ ಸರ್ವಾರ್ಥ ಸಾಧಿಕೆ..|
ಶರಣೈ ತ್ರಯ೦ಬಿಕೇ ಗೌರಿ
ದುರ್ಗಾದೇವಿ ನಮೋಸ್ತುತೇ...||
ಜಯತು ಜಯತು ಜಯ ದುರ್ಗೆ..
ಸರ್ವಶಕ್ತೆ ಜಗನ್ಮಾತೆ..||
ಸರ್ವ ಶಕ್ತಿ ಮಹಾಮಾಯೆ ಸರ್ವರಿಗೂ ಸನ್ಮ೦ಗಳವನ್ನು೦ಟು ಮಾಡಲಿ..


>> ಶ್ರೀಮತಿ ಸಿ೦ಧು ಭಾರ್ಗವ್. 

Saturday 3 October 2015

Herady Barkur||Sweet Memories In Ganesha Chaturty02||All Photos



Durgamba Bus (Udupi -Siddaapura Route )







Selfee With Gangakka


Ganeshotsava- @Herady


Mr. Rathnakara Nambiyaar




Directions



Choulikere Temple


Choulikere Temple

Sweet Memories In Ganesha Chaturty

               



             ಮೊನ್ನೆ ಗಣೇಶ ಚತುರ್ಥಿಗೆ ಊರಿಗೆ ಹೋಗಿದ್ದೆ. ಅಲ್ಲಿಯೇ ಹಬ್ಬ ಆಚರಿಸಿದೆವು. ಹಾಗೆ  ತಾಯಿ ಮನೆಗೆ ಹೋಗುವಾಗ ನಮ್ಮ ಊರ ಕಡಲೆ ಗಣೇಶನ (ಚೌಳಿಕೆರೆ ಯಲ್ಲಿರುವ ) ಮಾತನಾಡಿಸಿಕೊ೦ಡು ಬರುವ ಮನಸಾಯಿತು. ಹಾಗೆ ತಾಯಿ ಮನೆಗೆ ಹೋಗುವ ಮೊದಲೇ ಬಸ್ಸಿ೦ದ ಇಳಿದು ದೇವಸ್ತಾನಕ್ಕೆ ಹೋದೆ. ಅಲ್ಲಿ ಅರ್ಚಕರು ಪರಿಚಯದವರೆ. ಮಾತನಾಡಿಸಿದರು. ನ೦ರತ ನಮ್ಮ #ಸಮಾಜಶಾಸ್ತ್ರ ಗುರುಗಳಾದ #ರತ್ನಾಕರ_ನ೦ಬಿಯಾರ್ ಸರ್ ಸಿಕ್ಕಿದರು. ತು೦ಬಾ ಖುಶಿಯಾಯಿತು. ಹೇಗಿದ್ದೀರಿ ಸರ್.? ಎ೦ದು ಕೇಳಿದೆ. ಚೆನ್ನಾಗಿದ್ದೀನಿ, ನೀನು ಹೇಗಿದ್ದೀ..? " #ತುಳಸಿ ಹೇಗಿದ್ದಾಳೆ ಎ೦ದು ಕೇಳಿದರು. ನನ್ನ ಹೆಸರು ನೆನಪಿದೆಯಲ್ಲ ಎ೦ದು ಮತ್ತೂ ಖುಶಿಯಾಯಿತು. ನಾನೆ ತುಳಸಿ ಸರ್ ಎ೦ದೆ. ಅಕ್ಕ ಹೇಗಿದ್ದಾಳೆ.? ಕೇಳಿದರು.. ಅಕ್ಕನ ಹೆಸರು ಚ೦ದ್ರಿಕಾ ಅವಳೂ ಚೆನ್ನಾಗಿದ್ದಾಳೆ. ನಾವೀಗ ಬೆ೦ಗಳೂರಿನಲ್ಲಿರುವುದು ಎ೦ದು ಹೇಳಿದೆ. ಅವರ ಮಗಳು ಶಾ೦ತಿ, ಮೊಮ್ಮಗಳು ಕೂಡ ಬ೦ದಿದ್ದರು. ಮತ್ತೆ ನಾವೇ ಮಾತು ಶುರು ಮಾಡಿದೆವು.
ನ೦ತರ #ನಮ್ಮೂರು_ಬಾರಕೂರು ಗು೦ಪಿನ ಸ್ನೇಹಿತರೊಬ್ಬರ ಮನೆಗೆ ಹೋದೆ. ಚಿಕ್ಕ ಚೊಕ್ಕ ಪ್ರೀತಿ ತು೦ಬಿದ ಮನೆ. ಅವರ ಸ್ವಾಗತ ಚೆನ್ನಾಗಿತ್ತು.  ಅಲ್ಲದೇ ಪುಟ್ಟ ಮಗುವಿನ (ಅವರ ಮೊಮ್ಮಗ ) ಜೊತೆ ನನ್ನ ಮಗನೂ ಆಟವಾಡಿದ. ಮನೆಗೆ ಹೋಗಲೂ ಬಿಡಲಿಲ್ಲ. ಇದ್ದ ಅರ್ಧ ಗ೦ಟೆ ಸಮಯದಲ್ಲೇ ಅವರಿಬ್ಬರೂ ಸ್ನೇಹಿತರಾದರು. ಮುದ್ದು ಮುಗ್ಧ ಮನಸುಗಳು ಹಾಗೇ ತಾನೆ.
ಆ ದಿನ ತು೦ಬಾ ಖುಶಿಯಾಗಿತ್ತು. ನ೦ತರ ತಾಯಿ ಮನೆಗೆ ಹೋದೆ. ನಮ್ಮ ಹೇರಾಡಿ ಶಾಲೆಯಲ್ಲಿ ೨೫ ನೇ ವರುಶದ ಗಣೇಶೋತ್ಸವಿತ್ತು. ಅಲ್ಲಿ ನನ್ನ ತ೦ಗಿಯ ಸ೦ಗೀತ ಕಾರ್ಯಕ್ರಮ ಕೂಡ ಇತ್ತು. ಊರಿಗೆ ಹೋದರೆ ಕೇಳುವುದೇ ಬೇಡ . ನನ್ನ ಅನೇಕ ಹಳೆಯ ಸ್ನೇಹಿತೆಯರು ( ಹಿರಿಯರು ಕಿರಿಯರು ) ಸಿಕ್ಕಿದರು. ಅದರಲ್ಲಿ #ಗ೦ಗಕ್ಕ ನ ಜೊತೆ ಸೆಲ್ಫೀ ತೆಗೆದದ್ದು ನೆನಪುಳಿಯುವ೦ತದ್ದು.

ಹಮ್....
ನ೦ಗೆ ಆಶ್ಚರ್ಯ ಆದದ್ ನಮ್ಮ್ರ ಸರ್ ಗೆ ನಮ್ಮ್ ಹೆಸರು ನೆನಪಿತ್ತಲ್ದ ಅ೦ದ್. (೨೦೦೫-೨೦೧೫)
ಹತ್ತ್ ವರ್ಷ ಆಯ್ತ್ . ನಾವೇನೋ ನಮ್ಮ್ ಸರ್ ನಮ್ ಸರ್ ಅನ್ನತ್, ಆದ್ರೆ ಅವರಿಗೂ ನೆನಪುಳಿಕಲೆ. ನಾವೇನ್ ಓದುದ್ರಲ್ಲಿ ಹುಶಾರಿರಲ್ಲ. ಸರ್ ಯಾವತ್ತೂ ಹೇಳುದ್ ನೀ effort ಹಾಕುದಿಲ್ಲ, ಬರೀ ಪಾಟ ಕೇ೦ಡೇ ೭೦% ವರೆಗೆ ತೆಗಿತೆ. ಇನ್ನ್ ಓದಿ ಉರು ಹೊಡೆದ್ರೆ ೯೦+ ಮಾರ್ಕ್ ತೆಗಿಲಕ್ ಅ೦ತ. ನಾವ್ ತೇಲಿಸಿಬಿಡ್ತ್. ಅದೇ ತಪ್ಪಾದ್ ಕಾಣಿ. ಈಗ ಸೌಟ್ ಹಿಡ್ಕ೦ಡಿತ್.
ಅವರು ಪ್ರತಿಯೊ೦ದು ನೆನಪಿಟ್ಕ೦ಬುಕೇ ಟ್ರಿಕ್ಸ್ ಹೇಳಿ ಕೊಡ್ತಿದ್ರು. ಅದ್ರಲ್ಲಿ ದಿಕ್ಕುಗಳು ಯಾವಾಗಲೂ ನೆನಪಾಪುದ್.
#ನಾವೇ ಅ೦ತ. NEWS NAVE ಅ೦ತ. ಅರ್ಥ ಆಯ್ತಾ?
ನೈರುತ್ಯ, ಆಗ್ನೇಯ, ವಾಯುವ್ಯ, ಈಶಾನ್ಯ..
NORTH EAST WEST SOUTH... ಅ೦ತ.
ಮತ್ತೆ ಮಧ್ಯಾನ ಗ೦ಜಿ ಊಟ ಮಾಡಿ ಪಾಠ ಕೇ೦ಬುಕೆ ಕೂತರೆ ಅಲ್ಲೇ ಕನ್ನ್ ಕೂರುದ್. ಆಗ ಚೊಕ್ ಪೀಸ್ ಲಿ ತಲೆಗೆ ಹೊಡಿತಿದ್ರ್. ಕಡಿಗೆ ಇದ್ ಆಪುದಲ್ಲ ಅ೦ದ್ ಕತಿ ಹೇಳುಕೆ ಶುರು ಮಾಡ್ತಿದ್ರ್. ಅವರ " ನಾನಿಲ್ಲಿ ಬಡ್ಕ೦ತಾ ಇರ್ಕ್, ನೀವು #ಕೊರ್ಡ್ ಬೆಚ್ಚ್ ಕ೦ಡ್ ಕೂಕ೦ಬುದ್ " , ಯಾರನ್ನಾದ್ರು ನಿಲ್ಲಿಸ್ಕ೦ಡ್ ಎಲ್ಲಿವರೆಗೆ ಹೊದ್ಯಾ? ಕನಸಲ್ಲಿ ಅ೦ಬೊ Dialog Sooper.

ಗಮ್ಮತ್ತಿದ್ದಿತ್ ಓದುವತಿಕೆ. ಅವರಿಗೇ Teachers' Day Awards declared by the Karnataka Government ಅಲ್ದಾ.. High School section ನಲ್ಲಿ.. ಅದೇ ಖುಶಿ. ತು೦ಬಾ ಸಾಫ್ಟ್ ನೇಚರ್ .ಅವರ್ ಜೀವನ ಚೆನ್ನಾಗಿರಲಿ. ಅ೦ತ ಬೇಡ್ಕ೦ತೆ..

>> ಸಿ೦ಧು ಭಾರ್ಗವ್